Advertisement

ತಬ್ಲೀ ಸದಸ್ಯರ ಸುಳಿವಿತ್ತರೆ ಬಹುಮಾನ

10:46 PM Apr 25, 2020 | Sriram |

ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗವಹಿಸಿ ಬಂದು ತಲೆಮರೆಸಿಕೊಂಡಿರುವ ತಬ್ಲೀ -ಎ-ಜಮಾತ್‌ ಸಂಘಟನೆಯ ಸದಸ್ಯರ ಬಗ್ಗೆ ಮಾಹಿತಿ ನೀಡಿದಲ್ಲಿ 11 ಸಾವಿರ ಬಹುಮಾನವಾಗಿ ಕೊಡುವುದಾಗಿ ಬಿಜೆಪಿ ಸಂಸದ ರವೀಂದ್ರ ಕುಶ್ವಾಹ ಘೋಷಿಸಿದ್ದಾರೆ.

Advertisement

ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಅವರು, “ತಬ್ಲೀ -ಎ-ಜಮಾತ್‌ನ ಸಮಾವೇಶದಲ್ಲಿ ಭಾಗವಹಿಸಿದವರು ಮಾತ್ರವಲ್ಲ, ವಿದೇಶ ಗಳಿಂದ ಬಂದು ಸರ್ಕಾರಕ್ಕೆ ತಮ್ಮ ಪ್ರಯಾಣದ ವಿವರಗಳನ್ನು ಸಲ್ಲಿಸದವರ, ಸ್ಕ್ರೀನಿಂಗ್‌ನಿಂದ ತಪ್ಪಿಸಿಕೊಂಡಿರುವಂಥವರ ಬಗ್ಗೆ ಮಾಹಿತಿ ನೀಡಿದವರಿಗೂ ಈ ನಗದು ಪುರಸ್ಕಾರ ನೀಡಲಾಗುತ್ತದೆ’ ಎಂದು ಹೇಳಿದ್ದಾರೆ.

ಅಲ್ಲದೆ, ಅಂಥ ವ್ಯಕ್ತಿಗಳು ಸರ್ಕಾರಕ್ಕೆ ಮಾಹಿತಿ ನೀಡಿ, ಕೋವಿಡ್-19 ಪರೀಕ್ಷೆಗೊಳಗಾಗಿ ಸೋಂಕು ಪ್ರಸರಣ ತಡೆಗಟ್ಟಲು ಕೈ ಜೋಡಿಸಬೇಕು ಎಂದು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next