Advertisement

Anantkumar Hegde ಸಂಸದನಾಗಿರಲು ಅನರ್ಹ: ಸಿಎಂ ಸಿದ್ದರಾಮಯ್ಯ ಆಕ್ರೋಶ

11:42 PM Feb 24, 2024 | Team Udayavani |

ಹಾಸನ: ಅನಂತಕುಮಾರ್‌ ಹೆಗಡೆ ಸಂಸದನಾಗಿರಲು ಲಾಯಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಕಿಡಿಕಾರಿದರು.

Advertisement

ಅರಸೀಕೆರೆ ತಾಲೂಕು ಬಾಣಾವರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನವನ್ನೇ ಬದಲಿಸಬೇಕು ಎಂದು ಹೇಳಿಕೆ ನೀಡಿದ್ದವರ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದರು.

ದೇವೇಗೌಡರಿಗೆ ರಾಜಕೀಯ ಬದ್ಧತೆ ಇಲ್ಲ: ಸಿಎಂ ಸಿದ್ದುಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಸ್ಪಷ್ಟ ರಾಜಕೀಯ ನಿಲುವು, ಬದ್ಧತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಎಚ್‌.ಡಿ.ದೇವೇ ಗೌಡರು ಜಾತ್ಯತೀತ ನಿಲುವು ಪ್ರತಿಪಾದಿಸಿ ಕೊಂಡೇ ಬಂದಿದ್ದರು. ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುವೆ ಎಂದೂ ಹೇಳಿದ್ದರು. ಆದರೆ ಈಗ ಬಿಜೆಪಿ ಜತೆ ಶಾಮೀಲಾಗಿದ್ದಾರೆ. ಅವರಿಗೆ ಸ್ಪಷ್ಟ ರಾಜಕೀಯ ನಿಲುವು ಬದ್ಧತೆ ಇಲ್ಲ ಎಂದು ಟೀಕಿಸಿದರು.

ಅನಂತ್‌ ಹೇಳಿದ್ದೇನು?
ಉತ್ತರಕನ್ನಡ ಜಿಲ್ಲೆ ಮುಂಡಗೋಡ ಸಮೀಪದ ಪಾಳಾದಲ್ಲಿ ಮಾತನಾ ಡಿದ್ದ ಸಂಸದ ಅನಂತಕುಮಾರ ಹೆಗಡೆ, ಸ್ವಾತಂತ್ರಾÂ ನಂತರ ಅನೇಕ ಪಕ್ಷಗಳು ರಾಜ್ಯವನ್ನು ಆಳಿವೆ. ಆದರೆ, ಈಗಿನ ಸಿದ್ರಾಮುಲ್ಲಾ ಖಾನ್‌ರಂಥ ಸರಕಾ ರವನ್ನು ನಾವೆಲ್ಲೂ ನೋಡಿಲ್ಲ. ಹೇಸಿಗೆ ಬರುವ ರೀತಿ ಯಲ್ಲಿ ಅಲ್ಪ ಸಂಖ್ಯಾ ಕರ ತುಷ್ಟೀಕರಣ ಮಾಡುವಲ್ಲಿ ನಿರತವಾಗಿದೆ ಎಂದಿದ್ದರು.

Advertisement

ಅನಂತ ಕುಮಾರ ಹೆಗಡೆ ಸಾರ್ವಜನಿಕ ಬದುಕಿನಲ್ಲಿದ್ದು, ಸಮಾಜ ಸುಧಾರಣೆ ಕಡೆಗೆ ಕೊಂಡೊಯ್ಯಬೇಕು. ಅದನ್ನು ಬಿಟ್ಟು ಇಲ್ಲಸಲ್ಲ ದನ್ನು ಕೆದಕಿ, ಅಗೌರವ ಸೃಷ್ಟಿಸಿದರೆ ಅವರ ಮೈ ಮೇಲೆಯೇ ಬರು ತ್ತದೆ ಎಂಬುದರ ಎಚ್ಚರಿಕೆ ಇರಬೇಕು.
-ಎಚ್‌.ಕೆ. ಪಾಟೀಲ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next