Advertisement

ದಲಿತನ ವರಿಸಿದ್ದಕ್ಕೆ ಹತ್ಯೆಯತ್ನ

01:23 AM Jul 12, 2019 | mahesh |

ಲಕ್ನೋ: ದಲಿತ ಯುವಕನನ್ನು ವಿವಾಹವಾದ ಕಾರಣಕ್ಕೆ ನಮ್ಮನ್ನು ಕೊಲ್ಲಲು ನನ್ನ ತಂದೆಯೇ ಗೂಂಡಾಗಳನ್ನು ಕಳುಹಿಸಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಜೇಶ್‌ ಮಿಶ್ರಾ ಅವರ ಪುತ್ರಿ ಸಾಕ್ಷಿ ಮಿಶ್ರಾ (23) ಆರೋಪಿಸಿದ್ದಾರೆ. ಅಜಿತೇಶ್‌ ಕುಮಾರ್‌ (29) ಎಂಬುವರ ಜತೆಗೆ ವಿವಾಹವಾಗಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ವಿಡಿಯೋವೊಂದನ್ನು ಅಪ್‌ಲೋಡ್‌ ಮಾಡಿದ್ದು, ತಮಗೆ ಜೀವ ಬೆದರಿಕೆಯಿದೆ ಎಂಬ ಅಂಶವನ್ನೂ ಬಹಿರಂಗಪಡಿಸಿದ್ದಾರೆ.

Advertisement

ಬೆದರಿಕೆ ಹಿನ್ನೆಲೆಯಲ್ಲಿ ದಂಪತಿಯು ಪೊಲೀಸ್‌ ರಕ್ಷಣೆ ಕೇಳುವುದರ ಜೊತೆಗೆ, ಅಲಹಾಬಾದ್‌ ಹೈಕೋರ್ಟ್‌ಗೆ ಕೂಡ ಅರ್ಜಿ ಸಲ್ಲಿಸಿದ್ದಾರೆ. ‘ನಮ್ಮನ್ನು ಶಾಂತಿಯುತವಾಗಿ ಜೀವಿಸಲು ಬಿಡಿ. ಸ್ವಇಚ್ಛೆಯಿಂದ ಅಜಿತೇಶ್‌ ಕುಮಾರ್‌ ಜತೆಗೆ ವಿವಾಹವಾಗಿದ್ದೇನೆ. ತಂದೆ ಗೂಂಡಾಗಳ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ. ಅವರಿಂದ ಓಡಿ ಬಸವಳಿದಿದ್ದೇನೆ’ ಎಂದು ಸಾಕ್ಷಿ ಹೇಳಿಕೊಂಡಿದ್ದಾಳೆ.

ಪುತ್ರಿಯ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಶಾಸಕ ರಾಜೇಶ್‌ ಮಿಶ್ರಾ ‘ನಾನಾಗಲಿ, ಕುಟುಂಬದ ಸದಸ್ಯರಾಗಲಿ ಪುತ್ರಿಯ ನಿರ್ಧಾರಕ್ಕೆ ಅಡ್ಡಿ ಬಂದಿಲ್ಲ. ವಿವಾಹವಾಗಿರುವ ಯುವಕನು ನನ್ನ ಮಗಳಿಗಿಂತ 9 ವರ್ಷ ದೊಡ್ಡವನು. ಅಲ್ಲದೆ, ಅವನಿಗೆ ಸರಿಯಾದ ಆದಾಯವೂ ಇಲ್ಲ. ಇದಷ್ಟೇ ನಮ್ಮ ಅಸಮಾಧಾನಕ್ಕೆ ಕಾರಣ. ಪ್ರಾಪ್ತ ವಯಸ್ಕಳಾಗಿರುವ ಅವಳು ನಿರ್ಧಾರ ಕೈಗೊಳ್ಳಲು ಸ್ವತಂತ್ರಳು. ಈ ಬಗ್ಗೆ ಪಕ್ಷದ ವರಿಷ್ಠರಿಗೂ ಸೂಚನೆ ನೀಡಿದ್ದೇನೆ. ‘ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next