Advertisement

ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಕಾರು ಢಿಕ್ಕಿ;ವ್ಯಕ್ತಿ ಗಂಭೀರ

03:51 PM Feb 21, 2019 | Team Udayavani |

ಚಿತ್ರದುರ್ಗ: ಸಿ.ಟಿ.ರವಿ ಅವರ ಕಾರು ಢಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಬೆನ್ನಲ್ಲೇ ಹಿರಿಯೂರಿನ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರ ಕಾರು ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹಿರಿಯೂರಿನ ಪ್ರವಾಸಿ ಮಂದಿರದ ಬಳಿ ನಡೆದಿದೆ ಎಂದು ವರದಿಯಾಗಿದೆ.  

Advertisement

ಅಪಘಾತ ನಡೆಯುವ ವೇಳೆ ಶಾಸಕಿ ಪೂರ್ಣಿಮಾ ಅವರು ಕಾರಿನಲ್ಲಿರಲಿಲ್ಲ . ಫಾರ್ಚುನರ್‌ ಕಾರನ್ನು ಹಿಂದಕ್ಕೆ ಚಲಿಸುತ್ತಿರುವಾಗ ಅಬ್ದುಲ್‌ ರೆಹಮಾನ್‌ ಎನ್ನುವವರಿಗೆ ಢಿಕ್ಕಿಯಾಗಿದೆ. ರೆಹಮಾನ್‌ ಬೆನ್ನಿಗೆ ಗಂಭೀರವಾದ ಗಾಯವಾಗಿದ್ದು ಅವರನ್ನು  ಜಿಲ್ಲಾ  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್‌ಪಿ ಡಾ.ಕೆ.ಅರುಣ್‌ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಪೂರ್ಣಿಮಾ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ನಮ್ಮ ಕಾರು ಢಿಕ್ಕಿ ಆಗಿದೆ ಎನ್ನುವುದು ಸುಳ್ಳು, ಆವ್ಯಕ್ತಿ ಕುಡಿದು ಬಿದ್ದಿದ್ದರು. ನಾನೇ ಮುಂದೆ ನಿಂತು ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದೇನೆ ಎಂದಿದ್ದಾರೆ. 

ಹಿರಿಯೂರು ಠಾಣೆಯಲ್ಲಿ ಶಾಸಕಿಯ ಕಾರು ಚಾಲಕ ಮಲ್ಲಿಕಾರ್ಜುನ ವಿರುದ್ಧ ಸೆಕ್ಷನ್‌ 279 ಮತ್ತು 337 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next