Advertisement

ಅಸೆಂಬ್ಲಿಗೆ ಬುಟ್ಟಿ ತುಂಬಾ ಮಿಡತೆ ತಂದ್ರು!

10:01 AM Jan 25, 2020 | Hari Prasad |

ಜೈಪುರ: ರಾಜಸ್ಥಾನದ ಬಿಜೆಪಿ ಶಾಸಕ ಬಿಹಾರಿ ಲಾಲ್‌ ನೋಖಾ ಪ್ರತಿಭಟನಾ ಸೂಚಕವಾಗಿ ಬುಟ್ಟಿ ತುಂಬಾ ಮಿಡತೆಗಳನ್ನು ವಿಧಾನಸಭೆಗೆ ತಂದಿದ್ದರು. ರಾಜಸ್ಥಾನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಮಿಡತೆಗಳು ಲಗ್ಗೆ ಇಟ್ಟಿರುವ ಕಾರಣ, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಆಗುತ್ತಿದ್ದು, ಆ ಬಗ್ಗೆ ಸರಕಾರದ ಗಮನ ಸೆಳೆಯಲು ಅವರು ಮಿಡತೆಗಳನ್ನು ತಂದಿದ್ದರು.

Advertisement

11 ಜಿಲ್ಲೆಗಳ 7 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಕೃಷಿ ಭೂಮಿ ಮಿಡತೆಗಳ ದಾಳಿಗೆ ನಲುಗಿವೆ. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next