Advertisement

ಮೈತ್ರಿ ಸರಕಾರದಿಂದ ಅಭಿವೃದ್ಧಿ ಅಸಾಧ್ಯ: ನಳಿನ್‌

10:21 AM Jun 28, 2018 | |

ಬಳ್ಕುಂಜೆ : ಕಾಂಗ್ರೆಸ್‌ -ಜೆಡಿಎಸ್‌ ಸರಕಾರ ಅಪವಿತ್ರ ಮೈತ್ರಿಯಾಗಿದ್ದು ಇದು ಶಾಶ್ವತ ಅಲ್ಲ. ಇದರಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಕರ್ನಿರೆ ವಿಷ್ಣುಮೂರ್ತಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಬಿಜೆಪಿ ಬಳ್ಕುಂಜೆ ಶಕ್ತಿ ಕೇಂದ್ರದ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಧಿಕಾರದ ಹಂಚಿಕೆಯಲ್ಲಿಯೇ ಇದ್ದು ಜನಪರ ಕಾಳಜಿ ಇಲ್ಲ. ಮುಂದಿನ ಮೂರು ತಿಂಗಳ ಒಳಗೆ ಈ ಸರಕಾರ ಬಿದ್ದುಹೋಗಲಿದೆ ಎಂದರು. ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, ಸರಕಾರದಿಂದ ಸಿಗುವ ಸವಲತ್ತುಗಳನ್ನು ಜನರಿಗೆ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಅಲ್ಲಲ್ಲಿ ಅಧಿಕಾರಿಗಳ ಸಭೆ ಕರೆದು ಕೊಂದು ಕೊರತೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ
ಎಂದರು.

ಸಮ್ಮಾನ
ಈ ಸಂದರ್ಭ ಬಳ್ಕುಂಜೆ ಶಕ್ತಿ ಕೇಂದ್ರದ ವತಿಯಿಂದ ಶಾಸಕ ಉಮಾನಾಥ ಕೋಟ್ಯಾನ್‌ ಅವರನ್ನು ಗೌರವಿಸಲಾಯಿತು. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್‌ ಬೋಳ್ಳೂರು, ತಾ.ಪಂ. ಸದಸ್ಯ ದಿವಾಕರ ಕರ್ಕೇರ, ರಶ್ಮೀ ಆಚಾರ್ಯ, ಶರತ್‌ ಕುಬೆವೂರು, ಬಳ್ಕುಂಜೆ ಗ್ರಾ.ಪಂ. ಅಧ್ಯಕ್ಷ ದಿನೇಶ್‌ ಪುತ್ರನ್‌, ಸುಮಿತ್ರಾ ಎಸ್‌. ಕೋಟ್ಯಾನ್‌, ಕಿಲ್ಪಾಡಿ ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ್‌ ರಾವ್‌, ಬಿಜೆಪಿ ಮಂಡಲಾಧ್ಯಕ್ಷ ಈಶ್ವರ್‌ ಕಟೀಲು, ಕಾರ್ಯದರ್ಶಿ ಸುಕೇಶ್‌ ಶಿರ್ತಾಡಿ, ಸುದರ್ಶನ್‌, ಜಗದೀಶ್‌ ಅಧಿಕಾರಿ, ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ ಶೆಟ್ಟಿ, ದೇವಪ್ರಸಾದ್‌ ಪುನರೂರು, ಭುವನಾಭಿರಾಮ ಉಡುಪ, ಬಳ್ಕುಂಜೆ ಪಂ. ಸದಸ್ಯರಾದ ನವೀನ್‌ ಶೆಟ್ಟಿ, ಪ್ರಭಾಕರ ಶೆಟ್ಟಿ, ಮಮತಾ ಜಿ. ಪೂಂಜ, ಜಯಲಕ್ಷ್ಮೀ ಕರ್ನಿರೆ, ಆನಂದ್‌ ಕೊಲ್ಲೂರು, ಗ್ರಾಮ ಸಮಿತಿಯ ದಿನೇಶ್‌ ದೇವಾಡಿಗ, ಕಾರ್ಯದರ್ಶಿ ಯೋಗೀಶ್‌ ಕುಂದರ್‌ ಮತ್ತಿತರರು ಉಪಸ್ಥಿತರಿದ್ದರು. ತಾ.ಪಂ. ಸದಸ್ಯ ದಿವಾಕರ ಕರ್ಕೇರ ಸ್ವಾಗತಿಸಿದರು. ಪ್ರಣೇಶ್‌ ದೇಂದಡ್ಕ ಕಾರ್ಯ ಕ್ರಮ ನಿರೂಪಿಸಿದರು.

ಪ್ರತಿ ಗ್ರಾಮಕ್ಕೆ ಕೋಟಿ ರೂ.
ಯೋಗ ಭಾರತದ ಸಂಸ್ಕೃತಿಯಾಗಿದ್ದು ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ 192 ದೇಶದಲ್ಲಿ ಯೋಗ ಮಹತ್ವ ಪಡೆದಿದೆ. ಮುಂದಿನ ದಿನದಲ್ಲಿ ಕೇಂದ್ರ ಸರಕಾರದಿಂದ ಪ್ರತಿಯೊಂದು ಗ್ರಾಮ ಪಂಚಾಯತ್‌ಗೆ ನೇರವಾಗಿ ಒಂದು ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಸಂಸದರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next