Advertisement

ಕುಂಬ್ಡಾಜೆ ಗ್ರಾ.ಪಂ. ಕಚೇರಿಗೆ ಬಿಜೆಪಿ ಮಾರ್ಚ್‌

04:00 PM Jul 05, 2019 | keerthan |

ಬದಿಯಡ್ಕ: ಕುಂಬ್ಡಾಜೆ ಗ್ರಾ.ಪಂ.ನ ಯುಡಿಎಫ್‌ ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದ್ದು ಅಭಿವೃದ್ಧಿ ವಿಚಾರದಲ್ಲಿ ಬೇಜವಬ್ದಾರಿತನದ ನಿಲುವನ್ನು ತೋರುತ್ತಿರುವ ಆಡಳಿತ ವರ್ಗ ಸಾಧಾರಣ ಜನರ ಸಮಸ್ಯೆಗಳಿಗೆ ಸ್ಪಂಧಿಸದಿರುವುದು ಖಂಡನಾರ್ಹವಾಗಿದೆ ಎಂದು ಬಿಜೆಪಿ ದೇಶೀಯ ಸಮಿತಿ ಸದಸ್ಯರಾದ ಎಂ. ಸಂಜೀವ ಶೆಟ್ಟಿ ಆರೊಪಿಸಿದರು.

Advertisement

ಗ್ರಾ.ಪಂ. ಕಚೇರಿ ಸಮೀಪವಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಆದಷ್ಟು ಬೇಗ ಜನೋಪಯೋಗಕ್ಕೆ ಬಿಟ್ಟು ಕೊಡುವಲ್ಲಿ ಮುತುವರ್ಜಿ ವಹಿಸುವಲ್ಲಿ ಯುಡಿಎಫ್‌ ಆಡಳಿತ ಮುಂದೆ ಬರಬೇಕೆಂದು ಅವರು ಹೇಳಿದರು. ಕುಂಬ್ಡಾಜೆ ಗ್ರಾ.ಪಂ.ನ ಯುಡಿಎಫ್‌ ಆಡಳಿತ ಬೇಜವಬ್ದಾರಿತನದ ನಿಲುವಿಗೆದುರಾಗಿ ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿಯ ನೇತೃತ್ವದಲ್ಲಿ ಕುಂಬ್ಡಾಜೆಗ್ರಾ.ಪಂ. ಕಚೇರಿಗೆ ನಡೆದ ಮಾರ್ಚ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಅಧ್ಯಕ್ಷರಾದ ಬಿ.ರಾಜೇಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಆಡಳಿತದಲ್ಲಿರುವ ಯುಡಿಎಫ್‌ ಆಡಳಿತಕ್ಕೆ ಜನರ ಬಗ್ಗೆ ಯಾವುದೇ ಕಾಲಜಿ ಇಲ್ಲ. ಹಲವಾರು ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹಾಗೂ ಅದರ ಸಬ್‌ಸೆಂಟರ್‌ಗಳ ಕಟ್ಟಡಗಳು ಪೊದೆ ಕಾಡುಗಳಿಂದ ತುಂಬಿದ್ದರೂ ಅದನ್ನು ಜನೋಪಯೋಗಕ್ಕೆ ಬಿಟ್ಟುಕೊಡಲು ಆಡಳಿತ ವರ್ಗ ಮುಂದೆ ಬರದಿರುವುದು ಜನರ ಬಗ್ಗೆ ಅವರಿಗಿರುವ ಬೇಜಬ್ದಾರಿಯನ್ನು ಎತ್ತಿ ತೋರಿಸುತ್ತಿದೆಯೆಂದೂ ಆರೋಪಿಸಿದರು.

ಎಂಡೋಸಲ್ಫಾನ್‌ ಮಕ್ಕಳಿಗಾಗಿ ನಿರ್ಮಿಸಿರುವ ಬಡ್ಸ್‌ ಶಾಲೆಯ ಕಾರ್ಯಚಟುವಟಿಕೆಯನ್ನು ಇದುವರೆಗೂ ಪ್ರಾರಂಭಿಸಿಲ್ಲ. ಪಿಎಚ್‌ಸಿ ಕಟ್ಟಡವನ್ನು ಜುಲೈ 20 ರ ಮುಂಚಿತವಾಗಿ ಜನೋಪಯೋಗಕ್ಕೆ ಬಿಟ್ಟು ಕೊಡದಿದ್ದಲ್ಲಿ ಅದರ ಉದ್ಘಾಟನೆಯನ್ನು ಬಿಜೆಪಿಯೇ ನೆರವೇರಿಸಲಿದೆಯೆಂದು ಅವರು ಮುನ್ನೆಚ್ಚರಿಕೆ ನೀಡಿದರು.

ಬಿಜೆಪಿ ಕಾಸರಗೋಡು ಮಂಡಲದ ಜಿಲ್ಲಾಧ್ಯಕ್ಷ ಅಡ್ವ.ಕೆ.ಶ್ರೀಕಾಂತ್‌ ಮಾತನಾಡಿ ಎಂಡೋಸಲ್ಫಾನ್‌ ಬಾಧಿತ ಕುಂಬ್ಡಾಜೆಗೆ ಸರಕಾರದಿಂದ ಹಲವಾರು ಯೋಜನೆಗಳು ಬರುತ್ತಿದೆ ಮಾತ್ರವಲ್ಲ ಕೇಂದ್ರ ಸರಕಾರದ ಭವನ ಪದ್ಧತಿಯಂತಹ ಹಲವಾರು ಯೋಜನೆಗಳು ಲಭಿಸುತ್ತಿದ್ದರೂ ಅದನ್ನು ಕಾರ್ಯಗತಗೊಳಿಸಲು ಇಲ್ಲಿನ ಯುಡಿಎಫ್‌ ಆಡಳಿತ ವಿಫಲವಾಗಿದೆ. ಯುಡಿಎಫ್‌ ಆಡಳಿತ ಸಂಪೂರ್ಣ ಸ್ಥಂಭನಾವಸ್ಥೆಯಲ್ಲಿದ್ದು ಭವನ ಪದ್ಧತಿಯಲ್ಲಿ ಅವ್ಯವಹಾರವನ್ನು ನಡೆಸಿ ಜನ ಸಾಮಾನ್ಯರನ್ನು ವಂಚಿಸಿರುವುದು ಸಂಬಂಧಪಟ್ಟವರು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದೂ ಆಗ್ರಹಿಸಿದರು.

Advertisement

ಬಿಜೆಪಿ ಕಾಸರಗೋಡು ಮಂಡಲಾಧ್ಯಕ್ಷರಾದ ಸುಧಾಮ ಗೋಸಾಡ ಮಾತನಾಡಿ ಕುಂಬ್ಡಾಜೆ ಗ್ರಾ.ಪಂ.ನಲ್ಲಿ ಉದ್ಯೋಗಸ್ಥರು ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸದೇ ವಿವಿಧ ಆವಶ್ಯಕತೆಗಳಿಗೆ ಕಚೇರಿಗೆ ಆಗಮಿಸುವ ಜನಸಾಮಾನ್ಯರು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಅವರು ಸಂಬಂಧಪಟ್ಟವರು ಇದರ ಬಗ್ಗೆ ಗಮನಹರಿಸಬೇಕೆಂದು ಆಗ್ರಹಿಸಿದರು.

ಮಾರ್ಚ್‌ನ ನೇತಾರರಾದ ಹರೀಶ್‌ ಗೋಸಾಡ, ಪ್ರಭಾಕರ ರೈ, ಹರೀಶ್‌ ಕುಣಿಕುಳ್ಳಾಯ, ವಾಸುದೇವ ಭಟ್‌, ರವೀಂದ್ರ ರೈ ಗೋಸಾಡ, ಶಸಿಧರ ಡಿ, ಕೊರಗಪ್ಪ, ಯಶೋಧಾ ಎನ್‌, ಶೈಲಜಾ ಭಟ್‌, ನಳಿನಿ, ಶಾಂತಾ ಕುಮಾರಿ, ನರಸಿಂಹ ಭಟ್‌ , ಸುಂದರ ಮವ್ವಾರು, ಸಂತೋಷ ರೈ, ಕೃಷ್ಣ ರೈ, ಚಂದ್ರಶೇಖರನ್‌.ಬಿ. ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next