Advertisement

ಸೋಲಿನ ಭೀತಿಯಲ್ಲಿ ಮೋದಿ ಪ.ಬಂಗಾಲದತ್ತ ನೋಡುತ್ತಿದ್ದಾರೆ : ಮಮತಾ ಬ್ಯಾನರ್ಜಿ

09:13 AM May 12, 2019 | Team Udayavani |

ಹರೋವಾ, ಪಶ್ಚಿಮ ಬಂಗಾಲ : ಕಳೆದ ಐದು ಹಂತದ ಲೋಕಸಭಾ ಚುನಾವಣೆಯಲ್ಲಿ ಕಳಪೆ ನಿರ್ವಹಣೆ ತೋರಿ ಸೋಲಿನ ಭೀತಿಯಲ್ಲಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈಗ ಪಶ್ಚಿಮ ಬಂಗಾಲದ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವ ಯತ್ನದಲ್ಲಿ ತೊಡಗಿದ್ದಾರೆ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Advertisement

ಮೋದಿ ಈಗ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ, ಅಂತೆಯೇ ಅವರು ಈ ಬಾರಿಯ ಲೋಕಸಭಾ ಚುನಾವಣೆಗಳನ್ನು ಸೋಲುವುದು ಖಚಿತವಿದೆ ಎಂದು ಮಮತಾ ಹೇಳಿದರು.

ಬಿಜೆಪಿಗೆ ಅಧಿಕಾರದ ಗದ್ದುಗೆಯನ್ನೇರುವ ಅಗತ್ಯದ ನಂಬರ್‌ ಎಲ್ಲಿಂದ ಬರುತ್ತದೆ ? ಉತ್ತರ ಪ್ರದೇಶದಲ್ಲಿ ಅದರ ಬಲ 73ರಿಂದ 13 ಅಥವಾ 17ಕ್ಕೆ ಇಳಿಯಲಿದೆ. ಆಂಧ್ರ ಪ್ರದೇಶ, ಕೇರಳ, ಪಶ್ಚಿಮ ಬಂಗಾಲ, ತಮಿಳು ನಾಡು, ರಾಜಸ್ಥಾನ, ಪಂಜಾಬ್‌ ಮತ್ತು ಒಡಿಶಾ ಗಳಲ್ಲಿ ಬಿಜೆಪಿಯದ್ದು ಶೂನ್ಯ ಸಂಪಾದನೆ ಆಗಲಿದೆ. ಮಧ್ಯಪ್ರದೇಶದಲ್ಲಿ ಅದರ ಬಲ ಕಡಿಮೆಯಾಗಲಿದೆ ಎಂದು ಮಮತಾ ಬ್ಯಾನರ್ಜಿ ಅವರು ಇಂದಿಲ್ಲಿ ಟಿಎಂಸಿ ಅಭ್ಯರ್ಥಿ ನಸ್ರತ್‌ ಜಹಾನ್‌ ಪ್ರಚಾರಾರ್ಥ ಏರ್ಪಡಿಸಲಾದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುತ್ತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next