Advertisement

ದೋಣಿ ಮಗುಚಿದ್ದರೂ ಬಿಜೆಪಿ ನಾಯಕರು ಪಾರು 

11:55 AM Aug 27, 2018 | Team Udayavani |

ಲಕ್ನೋ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಉತ್ತರ ಪ್ರದೇಶದ ಬಸ್ತಿ ನದಿಯಲ್ಲಿ ಬಿಡುವ ವೇಳೆ ಬಿಜೆಪಿ ಸಂಸದರು ಸೇರಿ ಹಲವರು ನಾಯಕರಿದ್ದ ದೋಣಿ ಮಗುಚಿದ್ದು, ಸ್ವಲ್ಪದರಲ್ಲೇ ದೊಡ್ಡ ಅನಾಹುತದಿಂದ ಎಲ್ಲರೂ ಪಾರಾಗಿದ್ದಾರೆ.
ದೋಣಿಯಲ್ಲಿ ಬಿಜೆಪಿ ಸಂಸದ ಹರೀಶ್‌ ದ್ವಿವೇದಿ, ಹಿರಿಯ ನಾಯಕರಾದ ರಮಾಪತಿ ರಾಮ್‌ ತ್ರಿಪಾಠಿ, ರಾಮ್‌ ಚೌಧರಿ ಮುಂತಾದವರಿದ್ದರು. ದೋಣಿಯ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಅದರ ಮೇಲೆ ನಿಂತಿದ್ದರಿಂದ ದೋಣಿ ಮಗುಚಿತು. ಕೂಡಲೇ ಪೊಲೀಸರು ಧಾವಿಸಿ ನೀರಿನಲ್ಲಿ ಬಿದ್ದವರನ್ನು ರಕ್ಷಿಸಿದರು ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next