Advertisement

ಬಿಜೆಪಿ ನಾಯಕ ಸುರೇಂದ್ರ ಮಟಿಯಾಲಾ ಹತ್ಯೆ: 6 ಮಂದಿ ಬಂಧನ

12:41 AM Apr 23, 2023 | Team Udayavani |

ಹೊಸದಿಲ್ಲಿ: ದಿಲ್ಲಿ ಬಿಜೆಪಿ ಕಿಸಾನ್‌ ಮೋರ್ಚಾ ನಾಯಕ ಸುರೇಂದ್ರ ಮಟಿಯಾಲಾ ಅವರ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇಬ್ಬರು ಬಾಲ ಆರೋಪಿಗಳ ಸಹಿತ 6 ಮಂದಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

Advertisement

ಆರೋಪಿಗಳನ್ನು ಹರಿಯಾಣದ ಬಹದ್ದೂರ್‌ಗಢ ನಿವಾಸಿಗಳಾದ ಸಚಿನ್‌ ಹಾಗೂ ದಿಲ್ಲಿಯ ಪಾಲಮ್‌ ಕಾಲನಿಯ ಅರುಣ್‌ ಛಂದ್‌, ದೀಪಕ್‌ ಬರ್ವಾ, ಹರಿಯಾಣದ ಯೋಗೇಶ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಇವರ ಜತೆಗೆ 16 ಮತ್ತು 17 ವರ್ಷದ ಇಬ್ಬರು ಬಾಲಕರೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಆರೋಪಿಗಳಿಂದ ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲು ವಶಪಡಿಸಿಕೊಂಡಿದ್ದು, ಪ್ರಖರಣದ ಮತೊಬ್ಬ ಪ್ರಮುಖ ಆರೋಪಿ ಕಪಿಲ್‌ ಸಂಗವನ್‌ ಎಂಬವನಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಎ.14ರಂದು ಕಪಿಲ್‌ ಆರೋಪಿಗಳ ಗ್ಯಾಂಗ್‌ ಜತೆ ಸೇರಿ ಸುರೇಂದ್ರ ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next