Advertisement

ತಲ್ವಾರ್‌ನಿಂದ ಕೇಕ್‌ ಕಟ್ಬಿಜೆಪಿ ಮುಖಂಡನ ಸೆರೆ

01:20 AM Feb 06, 2019 | |

ಬೆಳಗಾವಿ: ತಲ್ವಾರ್‌ನಿಂದ ಕೇಕ್‌ ಕತ್ತರಿಸುವ ಮೂಲಕ ತನ್ನ ಜನ್ಮದಿನ ಆಚರಿಸಿಕೊಂಡಿದ್ದ ಬಿಜೆಪಿ ಮುಖಂಡನನ್ನು ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ. ಮಹಾನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಹಳೆ ಗಾಂಧಿ ನಗರದ ನಿವಾಸಿ ನಿಖೀಲ್‌ ರವಿ ಮುರಕುಟೆಯನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫೆ.1ರಂದು ಅದ್ಧೂರಿಯಾಗಿ ಜನ್ಮದಿನ ಆಚರಿಸಿದ್ದು, ಆಗ ತಲ್ವಾರ್‌ದಿಂದ ಕೇಕ್‌ ಕತ್ತರಿಸಿದ್ದಾನೆ. ಕಾರ್ಯಕ್ರಮದಲ್ಲಿದ್ದ ಉತ್ತರ ಕ್ಷೇತ್ರದ ಶಾಸಕ ಅನಿಲ್‌ ಬೆನಕೆ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ಕೇಕ್‌ ಕತ್ತರಿಸುವಾಗ ನಿಖೀಲ್‌ ಅವರ ಕೈ ಹಿಡಿದಿದ್ದರು. ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ಮಾಳಮಾರುತಿ ಠಾಣೆ ಇನ್ಸ್‌ಪೆಕ್ಟರ್‌ ಬಿ.ಆರ್‌. ಗಡ್ಡೇಕರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿ 10 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ನಿಖೀಲ್‌ ವಿರುದ್ಧ ಈಗಾಗಲೇ 307 ಕಲಂ ಅಡಿ ರೌಡಿ ಶೀಟ್ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next