Advertisement

ಮುಂಬೈ: ಬಿಜೆಪಿ ನಾಯಕ ಸೇರಿ ಐವರನ್ನು ಗುಂಡಿಕ್ಕಿ ಹತ್ಯೆ

09:54 AM Oct 08, 2019 | keerthan |

ಮುಂಬೈ: ಸ್ಥಳಿಯ ಭಾರತೀಯ ಜನತಾ ಪಾರ್ಟಿ ನಾಯಕ ಮತ್ತು ನಾಲ್ವರು ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಂದ ಘಟನೆ ಮಹರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ರವಿವಾರ ತಡರಾತ್ರಿ ನಡೆದಿದೆ.

Advertisement

ಬಿಜೆಪಿ ಕಾರ್ಪೋರೇಟರ್ ರವೀಂದ್ರ ಖಾರಟ್ ಮತ್ತು ಅವರ ಕುಟುಂಬ ಸದಸ್ಯರನ್ನು ಅವರ ಮನೆಯಲ್ಲಿಯೇ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಿಜೆಪಿ ನಾಯಕ ರವೀಂದ್ರ ಖಾರಟ್, ಸಹೋದರ ಸುನೀಲ್ ಖಾರಟ್, ಮಕ್ಕಳಾದ ರೋಹಿತ್ ಮತ್ತು ಪ್ರೇಮ್ ಸಾಗರ್ ಮತ್ತು ಗೆಳೆಯ ಸಮಿತ್ ಫಡ್ರೆ ಹತ್ಯೆಯಾದವರು.

ಇಬ್ಬರು ಸ್ಥಳದಲ್ಲೇ ಮೃತರಾದರೆ ಮತ್ತೆ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next