Advertisement

Reservation ಮೂಲ ವಿರುದ್ಧವೇ ಬಿಜೆಪಿ ಕೆಲಸ: ಅಖೀಲೇಶ್‌ ಯಾದವ್‌

12:43 AM Jul 01, 2024 | Team Udayavani |

ಹೊಸದಿಲ್ಲಿ: ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಮೀಸಲಾತಿ ವಿರುದ್ಧವೇ ಕೆಲಸ ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖೀಲೇಶ್‌ ಯಾದವ್‌ ರವಿವಾರ ಆರೋಪಿಸಿದ್ದಾರೆ. ಬಿಜೆಪಿ ದಲಿತ, ಅಲ್ಪಸಂಖ್ಯಾಕರು ಹಾಗೂ ಹಿಂದುಳಿದ ವರ್ಗ ಗಳ ಕುಟುಂಬಗಳಿಗೆ ಮೀಸಲು ನೀಡದೇ ತಾರತಮ್ಯ ಮಾಡುತ್ತಿದೆ ಎಂದೂ ಅವರು ಆರೋಪಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಮೀಸಲಾತಿ ಯನ್ನು ತಿದ್ದುವ ಪ್ರಯತ್ನದಲ್ಲೇ ಇದೆ. ಮೀಸಲಾತಿಯ ಮೂಲದ ವಿರುದ್ಧವೇ ಬಿಜೆಪಿ ಕೆಲಸ ಮಾಡುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲೂ ಈ ತಾರತಮ್ಯವಿದೆ. ಜೆಎನ್‌ಯುನಲ್ಲಿ ಶೇ.15ಕ್ಕಿಂತಲೂ ಕಡಿಮೆ ದಲಿತ, ಅಲ್ಪಸಂಖ್ಯಾಕ ಹಾಗೂ ಹಿಂದುಳಿದ ವರ್ಗಗಳ ಉದ್ಯೋಗಿಗಳಿದ್ದಾರೆ. ಈ ವರ್ಗಗಳ ಮೇಲೆ ಬಿಜೆಪಿಗೆ ಒಲವಿಲ್ಲ ಎಂದು ಅವರು ಆರೋಪಿಸಿದ್ದಾರೆ.

Advertisement

ಮೀಸಲು ವಿಸ್ತರಣೆಗೆ ಕಾನೂನು ಅಂಗೀಕರಿಸಿ: ಜೈರಾಂ ರಮೇಶ್‌
ಎಸ್ಸಿ, ಎಸ್ಟಿ ಹಾಗೂ ಒಬಿಸಿ ವರ್ಗಗಳ ಮೀಸಲನ್ನು ಶೇ.50ರ ಮಿತಿ ದಾಟಲು ಅನುಮತಿಸುವಂಥ ಕಾನೂನು ತಿದ್ದುಪಡಿಗೆ ಸಂಸತ್ತು ಅನುಮೋದನೆ ನೀಡಬೇಕು ಹಾಗೂ ರಾಜ್ಯ ಮತ್ತು ಕೇಂದ್ರಗಳ ಕಾನೂನುಗಳಿಗೆ ನ್ಯಾಯಾಲಯದ ಅನುಮೋ ದನೆಯಿಂದ ವಿನಾಯಿತಿ ನೀಡುವ ಸಂವಿಧಾನದ 9ನೇ ಶೆಡ್ಯೂಲ್‌ ವ್ಯಾಪ್ತಿಗೆ ಮೀಸಲು ಕೋಟಾ ವಿಸ್ತರಣೆ ಮಿತಿ ಕಾನೂನನ್ನೂ ಸೇರ್ಪಡೆಗೊಳಿಸ ಬೇಕು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಆಗ್ರಹಿಸಿ ಟ್ವೀಟ್‌ ಮಾಡಿ ದ್ದಾರೆ. ಬಿಹಾರದಲ್ಲಿ ಮೀಸಲು ಕೋಟಾ ವಿಸ್ತರಣೆ ಕುರಿತು ರೂಪಿಸಿರುವ ಕಾನೂನನ್ನು 9ನೇ ಶೆಡ್ಯೂಲ್‌ಗೆ ಸೇರಿಸುವಂತೆ ಜೆಡಿಯು ಆಗ್ರಹದ ಬೆನ್ನಲ್ಲೇ ಜೈರಾಮ್‌ ಈ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next