Advertisement

ಬಿಜೆಪಿ ಆಹ್ವಾನಕ್ಕೆ ನೇರವಾಗಿ “ನೋ’ಎನ್ನದ ರಜನಿ!

01:53 PM May 18, 2017 | Harsha Rao |

ಚೆ‌ನ್ನೈ: ರಾಜಕೀಯಕ್ಕೆ ಅಥವಾ ಬಿಜೆಪಿಗೆ ಸೇರುವುದಿದ್ದರೆ ಸ್ವಾಗತ ಎಂಬ ಬಿಜೆಪಿಯ ಮನವಿಗೆ ಸೂಪರ್‌ಸ್ಟಾರ್‌ ರಜನಿಕಾಂತ್‌ “ನೋ’ ಎಂದಿಲ್ಲ. ನೇರವಾಗಿ “ಇಲ್ಲ, ಬರುವುದಿಲ್ಲ’ ಎಂದು ಹೇಳದೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರುವ ರಜನಿ ಅವರು, ತಮ್ಮ ಮುಂದಿನ ಹೆಜ್ಜೆಗಳ ಬಗ್ಗೆ ಇನ್ನೂ ಕುತೂಹಲ ಉಳಿಯುವಂತೆ ನೋಡಿಕೊಂಡಿದ್ದಾರೆ.

Advertisement

ಬಿಜೆಪಿ ನಾಯಕ ಪೊನ್‌ ರಾಧಾಕೃಷ್ಣನ್‌ ಅವರ ಆಹ್ವಾನಕ್ಕೆ ಸಂಬಂಧಿಸಿ ಬುಧವಾರ ಪ್ರತಿಕ್ರಿಯಿಸಿರುವ ರಜನಿಕಾಂತ್‌, “ನಾನು ಹೇಳಬೇಕಿರುವುದನ್ನು ನೇರವಾಗಿ ಹೇಳಿದ್ದೇನೆ. ಇನ್ನು ಹೇಳಲಿಕ್ಕೆ ಏನೂ ಬಾಕಿ ಉಳಿದಿಲ್ಲ. ದೇವರ ಇಚ್ಛೆಯಂತೆ ನಡೆದುಕೊಳ್ಳುತ್ತೇನೆ’ ಎಂದಿದ್ದಾರೆ.

ಕಳೆದ ವರ್ಷ ರಜನಿ ಹೊಸ ಪಕ್ಷ ಕಟ್ಟುತ್ತಾರೆ. ಅದಕ್ಕೆ ಬಿಜೆಪಿ ಬೆಂಬಲ ಕೊಡುತ್ತದೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡಿತ್ತು. ಈಗಲೂ ಅವರು ಬಿಜೆಪಿ ಮನವಿಯ ಬಗ್ಗೆ ಯಾವುದೇ ನೇರ ಉತ್ತರ ಕೊಟ್ಟಿಲ್ಲ. ಆದರೆ, ದೇವರಿಚ್ಛಿಸಿದರೆ ನಾಳೆಯೇ ರಾಜಕೀಯ ಸೇರುತ್ತೇನೆ ಎಂದು ಹೇಳುವ ಮೂಲಕ ಸೋಮವಾರವಷ್ಟೇ ರಜನಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ರಜನಿ ರಾಜಕೀಯಕ್ಕೆ ಬರುವುದಾದರೆ ಬಿಜೆಪಿ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ ಎಂದು ಪೊನ್‌ ಆಹ್ವಾನ ಕೊಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next