Advertisement

“ಕನ್ನಡ ಧ್ವಜ’ಆದೇಶ ಹೊರಡಿಸಿದ್ದು ಬಿಜೆಪಿ ಸರ್ಕಾರ: ಚಂಪಾ

05:10 AM Jul 20, 2017 | Team Udayavani |

ಧಾರವಾಡ: ಕನ್ನಡ ಧ್ವಜ ಕುರಿತು ಮೊದಲು ಸರ್ಕಾರಿ ಆದೇಶ ಹೊರಡಿಸಿದ್ದು ಬಿಜೆಪಿಯವರೇ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ವ್ಯಂಗ್ಯವಾಡಿದರು.

Advertisement

ಇಲ್ಲಿನ ಕವಿಸಂನಲ್ಲಿ ಬುಧವಾರ ನಾಡೋಜ ಡಾ|ಪಾಪು ಕವಿಸಂ ಅಧ್ಯಕ್ಷರಾಗಿ-50, ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಈ ವಿಚಾರ ಚರ್ಚೆಗೆ ಬಂದಿತ್ತು. ನಂತರ ಸದಾನಂದಗೌಡ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಧ್ವಜ ಹಾರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದರು. ನಂತರ ಶೆಟ್ಟರ್‌ ಸಿಎಂ ಆಗಿದ್ದಾಗ ಒತ್ತಡ ಬಂದು ಆ ಆದೇಶ ಹಿಂಪಡೆದರು. ಬಿಜೆಪಿ ಅವರ ಕಾಲದಲ್ಲಿಯೇ ನಡೆದ ಬೆಳವಣಿಗೆಯನ್ನು ಈಗ ಕಾಂಗ್ರೆಸ್‌ನವರೇ ಮಾಡಿದ್ದಾರೆ ಎಂದು, ಅವರು ದೇಶದ್ರೋಹಿಗಳು ಎಂದು ಬಿಂಬಿಸಲು ಹೊರಟವರಿಗೆ ಏನು ಹೇಳಬೇಕು ಎಂದು ವ್ಯಂಗ್ಯವಾಡಿದರು

Advertisement

Udayavani is now on Telegram. Click here to join our channel and stay updated with the latest news.

Next