Advertisement
ಈಗಾಗಲೇ ಕರ್ನಾಟಕ ಸೇರಿದಂತೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪ್ರಚಾರ ಆರಂಭಿಸಿದ್ದಾರೆ. ಒಂದು ಮನೆ ಯಲ್ಲಿ ಸರಾಸರಿ 4 ಸದಸ್ಯರಿದ್ದಾರೆ ಎಂದು ಕೊಂಡರೆ, 20 ಕೋಟಿ ಜನರನ್ನು ತಲುಪಿದಂತೆ ಆಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ.
ಸೋಮವಾರದ ಅದ್ದೂರಿ ರೋಡ್ಶೋ ಬಳಿಕ, ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಚುನಾವಣೆ ಸಿದ್ಧತೆ ಬಗ್ಗೆ ಬಿರುಸಿನ ಸಮಾಲೋಚನೆ ಆರಂಭಿಸಿದ್ದಾರೆ. ಮಂಗಳವಾರ ಲಕ್ನೋದಲ್ಲಿ ಅವರು, ಪ್ರಯಾಗ್ರಾಜ್, ಅಂಬೇಡ್ಕರ್ನಗರ, ಸೀತಾಪುರ, ಕೌಶಂಬಿ, ಅಯೋಧ್ಯೆ ಸೇರಿದಂತೆ 10 ಲೋಕಸಭಾ ಕ್ಷೇತ್ರಗಳ ನಾಯಕರ ಜತೆ ಮಾತುಕತೆ ನಡೆಸಿದರು. ಬುಧವಾರ ಮತ್ತು ಗುರುವಾರವೂ ಸ್ಥಳೀಯ ನಾಯಕರ ಜತೆಗೆ ಅವರು ಸರಣಿ ಮಾತುಕತೆ ಮುಂದುವರಿಸಲಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ಉಸ್ತುವಾರಿ ಹೊತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಸ್ಥಳೀಯ ನಾಯಕರ ಜತೆ ಚುನಾವಣಾ ಕಾರ್ಯತಂತ್ರ ಕುರಿತು ಚರ್ಚಿಸಿದ್ದಾರೆ.