Advertisement

ಶ್ರೀಕೃಷ್ಣ ಚುಡಾಯಿಸುವಾತ ಎಂದ ಭೂಷಣ್‌ ಮೇಲೆ ಕೇಸು

12:35 PM Apr 03, 2017 | Karthik A |

ಹೊಸದಿಲ್ಲಿ: ಶ್ರೀಕೃಷ್ಣ ಪುರಾಣ ಕಾಲದ ಸ್ತ್ರೀ ಚುಡಾಯಿಸುವಾತ. ಉ.ಪ್ರ. ಮುಖ್ಯಮಂತ್ರಿಗೆ ಸ್ತ್ರೀ ವಿರೋಧಿ ವಿಚಕ್ಷಣ ಪಡೆಗೆ ಕೃಷ್ಣನ ಹೆಸರಿಡುವ ಧೈರ್ಯ ಇದೆಯೇ? ಎಂದು ಪ್ರಶ್ನಿಸಿ ಹಿರಿಯ ನ್ಯಾಯವಾದಿ ಪ್ರಶಾಂತ್‌ ಭೂಷಣ್‌ ಮಾಡಿದ ಟ್ವೀಟ್‌ ವಿವಾದಕ್ಕೆ ಕಾರಣವಾಗಿದೆ. ಮಾತ್ರವಲ್ಲ ಅವರ ವಿರುದ್ಧ ಮುಸ್ಲಿಂ ವ್ಯಕ್ತಿಯೊಬ್ಬರು ಕೇಸು ದಾಖಲಿಸಿದ್ದಾರೆ. ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಮಾಡಿದ ಆರೋಪವನ್ನು ಹೊರಿಸಲಾಗಿದೆ. 

Advertisement

ವಿವಾದ ಉಂಟಾಗುತ್ತಿದ್ದಂತೆ ತಮ್ಮ ಟ್ವೀಟ್‌ ಅನ್ನು ತಪ್ಪಾಗಿ ತಿಳಿದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿ ಮತ್ತೂಂದು ಟ್ವೀಟ್‌ ಮಾಡಿದ್ದರು. ಕೃಷ್ಣ ಗೋಪಿಕೆಯರನ್ನು ಛೇಡಿಸುತ್ತಾ ಬೆಳೆದ ಎನ್ನುವುದನ್ನು ಕೇಳುತ್ತಾ ಬಂದಿದ್ದೇವೆ ಎಂದಿದ್ದರು ಭೂಷಣ್‌. ಆ್ಯಂಟಿ ರೋಮಿಯೋ ಸ್ಕ್ವಾಡ್‌ ಶೇಕ್ಸ್‌ಪಿಯರ್‌ಗೆ ಭಾರತೀಯರ ಕೊಡುಗೆ. ಇಂಗ್ಲೆಂಡ್‌ನ‌ಲ್ಲಿ ಈವ್‌ ಟೀಸಿಂಗ್‌ ವಿರುದ್ಧ ಹೋರಾಡಲು ಆ್ಯಂಟಿ ಕೃಷ್ಣ ಸ್ಕ್ವಾಡ್‌ ರಚಿಸಿದರೆ ಆಶ್ಚರ್ಯವಿಲ್ಲ’ ಎಂಬ ಮಾಜಿ ಆಪ್‌ ನಾಯಕರೊಬ್ಬರ ಟ್ವೀಟ್‌ಗೆ ಭೂಷಣ್‌ ಪ್ರತಿಕ್ರಿಯಿಸಿದ್ದು ವಿವಾದಕ್ಕೆ ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next