Advertisement

ಮಾಜಿ ಸಚಿವ ಜಾವಡೇಕರ್‌ ಅವರಿಗೆ ಕೇರಳ ಬಿಜೆಪಿಯ ಹೊಣೆ

10:41 PM Sep 09, 2022 | Team Udayavani |

ನವದೆಹಲಿ: 2024ರ ಚುನಾವಣೆ ಹಾಗೂ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಯ ದೃಷ್ಟಿಯಲ್ಲಿ ಬಿಜೆಪಿಯು ಹಲವು ರಾಜ್ಯಗಳಿಗೆ ಉಸ್ತುವಾರಿಗಳ ಬದಲಾವಣೆ ಮಾಡಿದೆ. ಮಾಜಿ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

Advertisement

ಗುಜರಾತ್‌ನ ಮಾಜಿ ಸಿಎಂ ವಿಜಯ್‌ ರೂಪಾಣಿ ಅವರನ್ನು ಪಂಜಾಬ್‌ ಉಸ್ತುವಾರಿ, ತ್ರಿಪುರಾ ಮಾಜಿ ಸಿಎಂ ಬಿಪ್ಲಾಬ್‌ ಕುಮಾರ್‌ ದೇಬ್‌ ಅವರನ್ನು ಹರ್ಯಾಣದ ಉಸ್ತುವಾರಿಯಾಗಿ, ಮಾಜಿ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರನ್ನು ಕೇರಳದ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಹರ್ಯಾಣದ ಉಸ್ತುವಾರಿಯಾಗಿದ್ದ ವಿನೋದ್‌ ತಾಬ್ಡೆ ಅವರಿಗೆ ಬಿಹಾರ, ಲಕ್ಷ್ಮೀಕಾಂತ್‌ ವಾಜಪೇಯಿ ಅವರಿಗೆ ಜಾರ್ಖಂಡ್‌, ಮಹೇಶ್‌ ಶರ್ಮಾ ಅವರಿಗೆ ತ್ರಿಪುರಾದ ಜವಾಬ್ದಾರಿ ಕೊಡಲಾಗಿದೆ. ಕರ್ನಾಟಕದ ಉಸ್ತುವಾರಿಯಾದ ಅರುಣ್‌ ಸಿಂಗ್‌ ಅವರ ಸ್ಥಾನದಲ್ಲಿ ಬದಲಾವಣೆ ಮಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next