Advertisement

ಬಿಜೆಪಿ ಶಕ್ತಿ ಕೇಂದ್ರ, ಬೂತ್‌ ಸಭೆ

07:43 PM Jun 14, 2019 | Team Udayavani |

ಕುಂಬಳೆ: ಪಂಚಾಯತ್‌ ಬಿ.ಜೆ.ಪಿ.ಸಮಿತಿ ಸಭೆಯು ಪಕ್ಷದ ಕಚೇರಿಯಲ್ಲಿ ಶಕ್ತಿ ಕೇಂದ್ರ ಪ್ರಮುಖರು ಮತ್ತು ಬೂತ್‌ ಪ್ರಮುಖರ ಸಮ್ಮುಖದಲ್ಲಿ ಜರಗಿತು.

Advertisement

ಲೋಕಸಭಾ ಚುನಾವಣೆಯ ಅವಲೋಕನವನ್ನು ನಡೆಸಲಾಯಿತು.ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದ ರವೀಶ ತಂತ್ರಿ ಕುಂಟಾರು ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಪಂಚಾಯತ್‌ನಲ್ಲಿ ಪಕ್ಷಕ್ಕೆ ಹೆಚ್ಚಿನಮತಗಳನ್ನು ಗಳಿಸಲು ಶ್ರಮಮಿಸಿದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಮುಂದೆ ನಡೆಯಲಿರುವ ಮಂಜೇಶ್ವರ ವಿಧಾನಸಭಾ ಉಪಚುನಾವಣೆಗೆ ಸಜ್ಜಾಗಲು ಕಾರ್ಯಕರ್ತರಿಗೆ ಕರೆ ನೀಡಿದರು.

ಮುಂದಿನ 5 ವರ್ಷದಲ್ಲಿ ಪ್ರದಾನಿ ನರೇಂದ್ರ ಮೋದಿಯವರ ಸಬ್‌ಕಾಸಾತ್‌ ಸಬ್‌ಕಾ ವಿಕಾಸ್‌ ಸಬ್‌ಕಾ ವಿಕಾಸ್‌ ಜತೆಗೆ ನವಭಾರತ ಸೃಷ್ಟಿಸಲು ಪಕ್ಷದ ಕಾರ್ಯಕರ್ತರು ಅಹರ್ನಿಶಿ ದುಡಿಯ ಬೇಕೆಂದರು.

ಪಕ್ಷದ ನಾಯಕರಾದ ಬಾಬು ಗಟ್ಟಿ,ಮಣಿಕಂಠ ರೈ,ಕೆ.ರಮೇಶ್‌ ಭಟ್‌,ಮುರಳೀಧರ ಯಾದವ್‌,ಕಮಾಲಾಕ್ಷ ಆರಿಕ್ಕಾಡಿ,ಶಶಿ ಕುಂಬಳೆ,ಮದುಸೂದನ್‌,ಸುಜಿತ್‌ ರೈ,ಹರೀಶ್‌ ಗಟ್ಟಿ,ಪೇÅಮಲ ಉಪಸ್ಥಿತರಿದ್ದರು.ಬಿಜೆಪಿ ಪಂಚಾಯತ್‌ ಸಮಿತಿ ಅಧ್ಯಕ್ಷ ಕೆ. ಶಂಕರ ಆಳ್ವ ಅಧ್ಯಕ್ಷತೆ ವಹಿಸಿದರು.ಕಾರ್ಯದರ್ಶಿ ಕೆ.ಸುಧಾಕರ ಕಾಮತ್‌ ಸ್ವಾಗತಿಸಿದರು.ಸುರೇಶ್‌ ಶಾಂತಿಪಳ್ಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next