Advertisement

 ಕ್ಷೇತ್ರಾಭಿವೃದ್ಧಿಗೆ “ಸಲಗರ’ಏಕಮೇವ ಆಯ್ಕೆ

07:35 PM Apr 05, 2021 | Team Udayavani |

ಬಸವಕಲ್ಯಾಣ: ಕ್ಷೇತ್ರದ ಅಭಿವೃದ್ಧಿ ಆಗಬೇಕಾದರೆ ನಿಮ್ಮ ಆಯ್ಕೆ ಶರಣು ಸಲಗರ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರ ನಾಗದೆ ಹೇಳಿದರು. ತಾಲೂಕಿನ ತಳಭೋಗ ಗ್ರಾಮದಲ್ಲಿ ರವಿವಾರ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರವಾಗಿ ಪ್ರಚಾರ ನಡೆಸಿ ಅವರು ಮಾತನಾಡಿದರು.

Advertisement

ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರ ರೈತರು, ಮಹಿಳೆಯರು, ದೀನ ದಲಿತರಿಗೆ ಹಲವು ಯೋಜನೆ ರೂಪಿಸಿದೆ. ಆತ್ಮನಿರ್ಭರ ಯೋಜನೆ ಪರಿಚಯಿಸಿ ಕೆಳ ವರ್ಗದ ಜನರಿಗೆ ಆತ್ಮಸ್ಥೈರ್ಯ ತುಂಬಿದೆ ಎಂದರು.

ಅಭ್ಯರ್ಥಿ ಶರಣು ಸಲಗರ ಮಾತನಾಡಿ, ಬಿಜೆಪಿಯಿಂದ ಶರಣು ಸಲಗರ ಅವರಿಗೆ ಟಿಕೆಟ್‌ ಸಿಗಬೇಕೆಂದು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ದೇವರ ಮೊರೆ ಹೋಗಿ ಅನೇಕ ಹೋಮ-ಹವನ, ಪೂಜೆ-ಭಜನೆ, ಪಾದಯಾತ್ರೆ, ದೀಡ್‌ ನಮಸ್ಕಾರ ಹಾಗೂ ತೆಂಗಿನ ಕಾಯಿ ಒಡೆದಿದ್ದಾರೆ. ಇದರ ಪ್ರತಿಫಲ ಎಂಬಂತೆ ನಾನಿಂದು ನಿಮ್ಮ ಮುಂದೆ ನಿಂತಿದ್ದೇನೆ. ನಾನು ಚುನಾವಣೆಯಲ್ಲಿ ಗೆದ್ದರೆ ಕ್ಷೇತ್ರದ ಶಾಸಕನಾಗಿರುವುದಿಲ್ಲ; ಸದಾ ನಿಮ್ಮ ಸೇವಕನಾಗಿರುತ್ತೇನೆ. ಸಮಸ್ಯೆ ಪರಿಹಾರಕ್ಕೆ ಶಾಸಕರನ್ನು ಹುಡುಕಿ ಅಲೆದಾಡುವಂತಿಲ್ಲ. ನಾನೇ ಸ್ವತಃ ನಿಮ್ಮೂರಿಗೆ ಬರುವೆ ಎಂದರು.

ಚೌಕಿವಾಡಿ, ಚೌಕಿವಾಡಿ ತಾಂಡಾ, ರಾಮತೀರ್ಥ (ಕೆ), ಕೊಂಗೆವಾಡಿ, ಚಂಡಕಾಪುರ, ಉಮಾಪುರ, ಹಳ್ಳಿ, ನಿಲಕಂಠವಾಡಿ, ಖಾನಾಪುರವಾಡಿಯಲ್ಲಿ ಪ್ರಚಾರ ನಡೆಸಿದರು. ಈ ವೇಳೆ ತಳಭೋಗ ಗ್ರಾಮದ ನವನಾಥ ಸಾಳುಂಕೆ, ಕರಣ ಮಾನೆ, ರಾಮ ಮಾನೆ, ಲಕ್ಷ್ಮಣ ಪಾಟೀಲ್‌, ದೇವದಾಸ ಮಾನೆ, ರವಿ ಫುಲಾರೆ, ನವನಾಥ ರಾಠೊಡ, ಚೌಕಿವಾಡಿಯ ವಿಠuಲ್‌ ರೆಡ್ಡಿ, ಬಾಲಾಜಿ ರೆಡ್ಡಿ, ಸಂಜು ಪಾಟೀಲ್‌, ಅಂಗದ್‌ ಪಾಟೀಲ್‌, ಮೋಹನ ರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next