Advertisement

ಬೆಂಕಿ ನಂದಿದರೆ ಬಿಜೆಪಿ ಬೇಳೆ ಬೇಯುವುದಿಲ್ಲ : ಸಿದ್ದರಾಮಯ್ಯ ಕಿಡಿ 

03:45 PM Jul 14, 2017 | Team Udayavani |

ಮೈಸೂರು : ದಕ್ಷಿಣ ಕನ್ನಡದಲ್ಲಿ ಬೆಂಕಿ ನಂದಿದರೆ ಬಿಜೆಪಿಯ ಬೇಳೆ ಬೇಯುವುದಿಲ್ಲ. ಬೆಂಕಿ ನಂದುವುದು ಅವರಿಗೆ ಬೇಕಾಗಿಲ್ಲ , ಹೀಗಾಗಿ ಶಾಂತಿ ಸಭೆಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. 

Advertisement

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಂಗಳೂರಿಗೆ ಬೆಂಕಿ ಹಚ್ಚುತ್ತೇನೆ ಅಂತಾರೆ, 2 ಬಾರಿ ಸಂಸದರಾಗಿ ಆಯ್ಕೆ ಆದವರು ಮಾತಾಡುವ ಮಾತಾ ಇದು. ಯಡಿಯೂರಪ್ಪ ಹೇಳ್ತಾರೆ ಪ್ರಭಾಕರ್‌ ಭಟ್ರನ್ನು ಮುಟ್ಟಿದರೆ 
ರಾಜ್ಯ ಹೊತ್ತಿ ಉರಿಯುತ್ತದೆ ಅಂತಾ, ಶೋಭಾ ಕರಂದ್ಲಾಜೆ ಹೇಳ್ತಾರೆ ಕಾಂಗ್ರೆಸ್‌ ಪಕ್ಷದ ಶವ ಪೆಟ್ಟಿಗೆಗೆ ಮೊಳೆ ಹೊಡೆಯುತ್ತೇವೆ ಎಂದು. ಇದು ರಾಜಕಾರಣಿಗಳು ಆಡುವ ಮಾತಾ, ಬಿಜೆಪಿ ನಾಯಕರಿಗೆ ಸಂಸ್ಕಾರ, ಸಂಸ್ಕೃತಿ ಎನ್ನುವುದು ಇಲ್ಲ ಎನ್ನುವುದು ಇದರಿಂದ ತಿಳಿತುತ್ತದೆ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next