Advertisement

ಮುಗಿಯದ ಬಿಜೆಪಿ ಅತೃಪ್ತಿ? ಸಭೆಯ ಫೋಟೊ ವೈರಲ್‌; ನಿರಾಣಿ ಸ್ಪಷ್ಟನೆ

01:14 AM Jun 01, 2020 | Sriram |

ಬೆಂಗಳೂರು: ಬಿಜೆಪಿಯ ಅತೃಪ್ತ ಶಾಸಕರ ಮುನಿಸು ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಮುರುಗೇಶ್‌ ನಿರಾಣಿ, ಉಮೇಶ್‌ ಕತ್ತಿ ಮತ್ತು ಎ.ರಾಮದಾಸ್‌ ಪ್ರತ್ಯೇಕವಾಗಿ ಸಭೆ ನಡೆಸಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.

Advertisement

ಉಮೇಶ್‌ ಕತ್ತಿ ನಿವಾಸದಲ್ಲಿ ಅತೃಪ್ತರ ಸಭೆ ನಡೆದ ಬೆನ್ನಲ್ಲೇ ಹೈಕಮಾಂಡ್‌ ಸಿಎಂ ಬಿಎಸ್‌ವೈಗೆ ಕರೆ ಮಾಡಿ ತಲೆ ಕೆಡಿಸಿಕೊಳ್ಳದಂತೆ ಹೇಳಿತ್ತು. ಇದರಿಂದ ಅತೃಪ್ತರ ಬಂಡಾಯ ತಣ್ಣಗಾಯಿತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಆದರೆ ಈಗ ಮಾಜಿ ಸಚಿವ ಮುರುಗೇಶ್‌ ನಿರಾಣಿ ನಿವಾಸ ದಲ್ಲಿ ಕತ್ತಿ ಮತ್ತು ಎ.ರಾಮದಾಸ್‌ ಪ್ರತ್ಯೇಕ ಸಭೆ ನಡೆಸಿರುವ ಫೋಟೊ ಬಹಿರಂಗ ವಾಗಿದ್ದು, ಅತೃಪ್ತಿ ತಣ್ಣಗಾದಂತೆ ಕಾಣಿಸುತ್ತಿಲ್ಲ.

ನಿರಾಣಿ ಸ್ಪಷ್ಟನೆ
ವೈರಲ್‌ ಆದ ಫೋಟೊ ಬಗ್ಗೆ ಸ್ಪಷ್ಟನೆ ನೀಡಿರುವ ಮುರುಗೇಶ್‌ ನಿರಾಣಿ, ರಾಮದಾಸ್‌ ಮತ್ತು ಉಮೇಶ್‌ ಕತ್ತಿ ತಮ್ಮ ಮನೆಯಲ್ಲಿ ಎರಡು ತಿಂಗಳ ಹಿಂದೆ ಸಭೆ ಸೇರಿದ್ದು ನಿಜ. ರಾಜಕೀಯ ಚರ್ಚೆ ಅಥವಾ ಸರಕಾರ ಅಸ್ಥಿರಗೊಳಿಸುವ ಉದ್ದೇಶದ ಸಭೆ ಇದಾಗಿರಲಿಲ್ಲ ಎಂದಿದ್ದಾರೆ.

ಮಂಗಳವಾರ ಮತ್ತೊಂದು ಸುತ್ತು ಸಭೆ?
ಉಮೇಶ್‌ ಕತ್ತಿ ನಿವಾಸದಲ್ಲಿ ಅತೃಪ್ತ ಶಾಸಕರು ಮಂಗಳವಾರ ಮತ್ತೆ ಸಭೆ ಸೇರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.ಅತೃಪ್ತ ಶಾಸಕರ ಸಂಖ್ಯೆ ಪ್ರತಿಸಭೆಗೂ ಹೆಚ್ಚುತ್ತಿದ್ದು,ಇತ್ತೀಚೆಗೆ ನಡೆದ ಸಭೆಯಲ್ಲಿ ಸುಮಾರು 27 ಮಂದಿ ಶಾಸಕರು ಪಾಲ್ಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next