Advertisement

ಕೇರಳದ ಉನ್ನತ ವಿದ್ಯಾಭ್ಯಾಸ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ

07:45 PM Sep 16, 2020 | Team Udayavani |

ಕುಂಬಳೆ: ಬಿಜೆಪಿ ಕರಿ ದಿನದಂಗವಾಗಿ ಚಿನ್ನ ಕಳ್ಳಸಾಗಾಣಿಕೆಯ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ವಿಚಾರಣೆಯನ್ನು ಎದುರಿಸುತ್ತಿರುವ ಕೇರಳದ ಉನ್ನತ ವಿದ್ಯಾಭ್ಯಾಸ ಸಚಿವ ಕೆ. ಟಿ ಜಲೀಲ್‌ ರಾಜೀನಾಮೆ ನೀಡಬೇಕೆಂದು ಬಿಜೆಪಿ ಕುಂಬಳೆ ಪಂಚಾಯತ್‌ ಸಮಿತಿ ವತಿಯಿಂದ ಪ್ರತಿಭಟನೆ ಮತ್ತು ಸಚಿವರ ಪ್ರತಿಕೃತಿ ದಹಿಸಲಾಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬ್ಳೆ ಬಿಜೆಪಿ ಅಧ್ಯಕ್ಷ ಕೆ. ಸುಧಾಕರ ಕಾಮತ್‌ ವಹಿಸಿದರು.ಬಿಜೆಪಿ ಮಂಡಲ ಅಧ್ಯಕ್ಷ ಮಣಿಕಂಠ ರೈ ಉದ್ಘಾಟಿಸಿದರು. ಬಿಜೆಪಿ ಯುವಮೊರ್ಚಾ ನಾಯಕರಾದ ಮುರಳೀಧರ ಯಾದವ್‌, ಕೆ. ರಮೇಶ್‌ ಭಟ್‌, ಶಶಿ ಕುಂಬಳೆ ಮಧುಸೂದನ, ಮಹೇಶ್‌ ಪುಣಿಯೂರ್‌, ಸುಜಿತ್‌ ರೈ, ವಿವೇಕಾನಂದ, ಪ್ರದೂಷ್‌, ಪ್ರೇಮಲತಾ ಯಸ್‌ ಗಟ್ಟಿ, ಜಿತೇಶ್‌ ನಾಯ್ಕಪು, ಜಗದೀಶ್‌ ಪೇರಾಲ್‌ ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next