Advertisement

MUDA ಕೇಸ್‌ ಸಿಬಿಐಗೆ ಕೊಡಲು ರಾಜ್ಯಪಾಲರಿಗೆ ಬಿಜೆಪಿ ಆಗ್ರಹ

01:18 AM Jul 26, 2024 | Team Udayavani |

ಬೆಂಗಳೂರು: ಅಧಿವೇಶನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚಿಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ರಾಜ್ಯಪಾಲರ ಅಂಗಳಕ್ಕೆ ಪ್ರಕರಣವನ್ನು ಒಯ್ದಿರುವ ವಿಪಕ್ಷಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ನಿರ್ದೇಶನ ನೀಡ ಬೇಕೆಂದು ಮನವಿ ಮಾಡಿದ್ದು, ಇದು ಸಿಬಿಐ ತನಿಖೆಗೆ ಯೋಗ್ಯವಾದ ಪ್ರಕರಣ ಎಂಬುದನ್ನು ರಾಜ್ಯಪಾಲರಿಗೆ ಮನರಿಕೆ ಮಾಡಿಕೊಟ್ಟಿವೆ.

Advertisement

ಅಂದರೆ ಈ ಹಗರಣ ಹೇಗೆ ಆರಂಭವಾಯಿತು? ಏನೆಲ್ಲ ಆಯಿತು? ಎಂಬ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. ಚರ್ಚೆಗೆ ಪಟ್ಟು ಹಿಡಿದು ಬುಧವಾರದಿಂದ ವಿಧಾನ ಮಂಡಲದ ಉಭಯ
ಸದನಗಳಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದ ಬಿಜೆಪಿ-ಜೆಡಿಎಸ್‌, ಗುರುವಾರ ಕೂಡ ಧರಣಿ ಮುಂದುವರಿಸಿದ್ದರಿಂದ ಶುಕ್ರವಾರದವರೆಗೆ ನಡೆಯಬೇಕಿದ್ದ ಕಲಾಪವು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತು. ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲು ಉಭಯ ಸದನಗಳ ಸದಸ್ಯರು ನಿರ್ಧರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next