Advertisement

Ayodhya; ಬಿಜೆಪಿ ಸೋಲಿಂದ ಆದಾಯ ಕೊರತೆ: ರಿಕ್ಷಾ ಚಾಲಕರು

07:40 AM Jun 12, 2024 | Team Udayavani |

ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯ ನ್ನೊಳಗೊಂಡ ಲೋಕಸಭಾ ಕ್ಷೇತ್ರ ಫೈಜಾಬಾದ್‌ನಲ್ಲಿ ಬಿಜೆಪಿಗೆ ಸೋಲಾಗಿರುವ ಕಾರಣ ದೇಗುಲ ಪಟ್ಟಣಕ್ಕೆ ಪ್ರವಾಸಿಗರ ಭೇಟಿಯೂ ಇಳಿಕೆಯಾಗಿದೆ. ಇದರಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಅಯೋಧ್ಯೆಯ ಇ-ರಿಕ್ಷಾ ಚಾಲಕರು ಅಳಲು ತೋರಿಕೊಂಡಿದ್ದಾರೆ.

Advertisement

ಬಿಜೆಪಿ ಸರ್ಕಾರವೂ  ಕೂಡ ಫ‌ಲಿತಾಂಶದ ಬಳಿಕ ಅಯೋಧ್ಯೆ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ಇದೇ ಪರಿಸ್ಥಿತಿ ಮುಂದು ವರಿದರೆ ಅಯೋಧ್ಯೆಯಂತೆ ಇನ್ನೂ ಕೆಲವು ನಗರಗಳು ಕೂಡ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ದಿನಂಪ್ರತಿ 500 ರೂ.ಗಳಿಂದ 800 ರೂ. ವರೆಗೆ ದುಡಿಯುತ್ತಿದ್ದ ನಾವು ಈಗ 250 ರೂ. ಸಂಪಾದಿಸುವುದೂ ಕಷ್ಟವಾಗಿದೆ. ಬೀದಿ ವ್ಯಾಪಾರಿ ಗಳದ್ದೂ ಇದೇ ಪಾಡು ಎಂದು ಹೇಳಿದ್ದಾರೆ.

ಉತ್ತರ ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರೀ ಹಿನ್ನಡೆ ಅನುಭವಿಸಿದ್ದು ಮಾತ್ರವಲ್ಲದೆ ಭವ್ಯ ರಾಮ ಮಂದಿರ ನಿರ್ಮಾಣವಾದ ಕ್ಷೇತ್ರದಲ್ಲೇ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯ ಸಾಧಿಸಿರುವುದು ಫಲಿತಾಂಶದ ದಿನ ಭಾರೀ ಸುದ್ದಿಯಾಗಿತ್ತು. ಅನೇಕರು ಸೋಲಿಗೆ ನಾನಾ ರೀತಿಯ ವಿಶ್ಲೇಷಣೆಗಳನ್ನೂ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next