Advertisement

ಮಂಡ್ಯ ಚುನಾವಣಾಧಿಕಾರಿ ವಿರುದ್ಧ ಬಿಜೆಪಿ ದೂರು

02:03 AM Apr 04, 2019 | Team Udayavani |

ಬೆಂಗಳೂರು: ನಾಮಪತ್ರ ಪರಿಶೀಲನೆ ವೇಳೆ ಮಂಡ್ಯ ಚುನಾವಣಾಧಿಕಾರಿ ಕಾನೂನು ಉಲ್ಲಂಘಿಸಿ ಕಾರ್ಯನಿರ್ವಹಿಸಿದ್ದಾರೆ ಎಂದು ಆರೋಪಿ ಬಿಜೆಪಿ ಮುಖಂಡರು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

Advertisement

ರಾಜ್ಯ ಬಿಜೆಪಿ ವಕ್ತಾರ ಗೋ.ಮಧುಸೂದನ್‌, ವಕೀಲರಾದ ವಿನೋದ್‌ ಕುಮಾರ್‌, ದತ್ತಗುರು ಹೆಗಡೆ ಮೊದಲಾದವರು ಬುಧವಾರ ರಾಜ್ಯ ಚುನಾವಣಾಧಿಕಾರಿ
ಸಂಜೀವ್‌ ಕುಮಾರ್‌ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ನಿಖೀಲ್‌ ಅವರ ನಾಮಪತ್ರ ಪರಿಶೀಲನೆಗೆ ಕಾನೂನೂ ಮಿರಿ ಅವಕಾಶ ನೀಡಿದ್ದು, ಸುಮಲತಾ ಅವರ
ಚುನಾವಣಾ ಏಜೆಂಟ್‌ ನೀಡಿರುವ ದೂರು ಪರಿಶೀಲನೆ ಮಾಡದೇ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಿಸಿದ್ದಾರೆ ಎಂದು ದೂರಲಾಗಿದೆ.

ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಚುನಾವಣಾಧಿಕಾರಿಯು, ಮುಂದೆ ನ್ಯಾಯಯುತ ಅಥವಾ ಪಾರದರ್ಶಕ ಚುನಾವಣೆ ನಡೆಸಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ. ಮಂಡ್ಯದಲ್ಲಿ ಪಾರದರ್ಶಕ ಚುನಾವಣೆಯಾಗಲು ಚುನಾವಣಾ ಅಧಿಕಾರಿ ಮತ್ತು ಚುನಾವಣಾ ವೀಕ್ಷಕರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next