Advertisement

ಆರ್.ಆರ್.ನಗರ ಕುರುಕ್ಷೇತ್ರದಲ್ಲಿ ಮುನಿರತ್ನನೇ ಕಿಂಗ್: ಎದುರಾಳಿ ಕುಸುಮಾ ಎದುರು ಭರ್ಜರಿ ಜಯ

03:09 PM Nov 10, 2020 | keerthan |

ಬೆಂಗಳೂರು: ಹಲವು ಕುತೂಹಲಗಳಿಗೆ ಕಾರಣವಾಗಿದ್ದ ರಾಜರಾಜೇಶ್ವರಿ ನಗರ ಉಪಚುನಾವಣೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿದ್ದ ಮುನಿರತ್ನ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.

Advertisement

ಇದೇ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಕುಸುಮಾ ಅವರು ಸೋಲನುಭವಿಸಿದ್ದಾರೆ. ಜೆಡಿಎಸ್ ನ ಕೃಷ್ಣಮೂರ್ತಿ ಅವರದ್ದು ತೀರಾ ಸಾಧಾರಣ ಪ್ರದರ್ಶನ.

ಇದುವರೆಗೆ 25 ಸುತ್ತುಗಳ ಮತ ಎಣಿಕೆ ಮುಕ್ತಾಯವಾಗಿದ್ದು, ಮುನಿರತ್ನ ಅವರು 1,25,734 ಮತಗಳನ್ನು ಪಡೆದರೆ ಕಾಂಗ್ರೆಸ್ ನ ಕುಸುಮಾ 67,798  ಮತಗಳನ್ನು ಪಡೆದರು. ಜೆಡಿಎಸ್ ಗೆ ಲಭಿಸಿದ್ದು 10,251 ಮತಗಳಷ್ಟೇ. ಇದರೊಂದಿಗೆ ಮುನಿರತ್ನ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕುಸುಮಾ ಅವರಿಗಿಂದ 57,936  ಹೆಚ್ಚು ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ:ಶಿರಾದಲ್ಲಿ ‘ವಿಜಯ’: ಕಲ್ಪತರು ನಾಡಿನಲ್ಲಿ ಕಮಲ ಅರಳಿಸಿದ ಡಾ.ರಾಜೇಶ್ ಗೌಡ

ಡಿಕೆಶಿಗೆ ಮುಖಭಂಗ: ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಚುನಾವಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಆರ್.ಆರ್. ನಗರ ಫಲಿತಾಂಶ ದೊಡ್ಡ ಹಿನ್ನಡೆಯಾಗಿದೆ. ಪ್ರತಿಷ್ಠೆಯ ವಿಚಾರವಾಗಿ ವೈಯಕ್ತಿಕ ಹೊಣೆಗಾರಿಕೆಯೊಂದಿಗೆ ಕೆಲಸ ನಿರ್ವಹಿಸಿದ್ದ ಡಿಕೆ ಸಹೋದರರಿಗೆ ಕುಸುಮಾ ಸೋಲು ಮುಖಭಂಗ ಉಂಟುಮಾಡಿದೆ.

Advertisement

ಮಿನಿಸ್ಟರ್ ಮುನಿರತ್ನ: ಉಪಚುನಾವಣೆಯಲ್ಲಿ ಗೆದ್ದ ಕೂಡಲೇ ಮುನಿರತ್ನಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಇದೀಗ ಚುನಾವಣೆಯಲ್ಲಿ ಗೆದ್ದಾಯ್ತು, ಇನ್ನು ಸಚಿವಗಿರಿಯೊಂದೇ ಬಾಕಿ.

Advertisement

Udayavani is now on Telegram. Click here to join our channel and stay updated with the latest news.

Next