Advertisement
ಉಭಯ ಜಿಲ್ಲೆಗಳಲ್ಲೂ ಕೆಲವು ಹಾಲಿ ಶಾಸಕರಿಗೆ ಅವಕಾಶ ಸಿಗದು ಹಾಗೂ ಹೊಸ ಮುಖಗಳ ಪ್ರಯೋಗ ನಡೆಯಲಿದೆ ಎಂಬ ಅಂಶ ಬಹಳ ಚಾಲ್ತಿಯಲ್ಲಿರುವ ಕಾರಣ ಕುತೂಹಲ ಹೆಚ್ಚಾಗಿದೆ. ಎ.13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಇಷ್ಟಾ ದರೂ ಇನ್ನೂ ಅಭ್ಯರ್ಥಿಗಳ ಘೋಷಣೆಯೇ ಆಗದಿರುವುದು ಕಾರ್ಯ ಕರ್ತರ ಪಾಳಯ ದಲ್ಲೂ ಕಳವಳಕ್ಕೆ ಕಾರಣವಾಗಿದೆ.
ಮಂಗಳೂರಿನಲ್ಲಿ ಬೆಳಗ್ಗೆ ಮಂಗಳೂರು ವಿಭಾಗದ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟನೆ ವೇಳೆ ಸಂಜೆ ವೇಳೆಗೆ ಟಿಕೆಟ್ ಘೋಷಣೆಯಾಗಿರುತ್ತದೆ ಎಂಬ ಹುರುಪಿತ್ತು. ಆದರೆ ನಾಳೆ ಬಿಡುಗಡೆಯ ಸಾಧ್ಯತೆ ಎಂಬ ವರದಿ ಬಂದ ಮೇಲೆ ಉತ್ಸಾಹ ಕುಸಿಯಿತು.
Related Articles
ಇವೆರಡನ್ನೂ ಅಳೆದು ತೂಗಿ ಯಾವುದೇ ರೀತಿಯಲ್ಲೂ ಹಿನ್ನಡೆಯಾಗಬಾರದೆಂಬ ಲೆಕ್ಕಾಚಾರವೂ ಇದೆ.
Advertisement
ಕಾಂಗ್ರೆಸ್ನ ಮತ್ತೂಂದು ಪಟ್ಟಿಯೂ ಇಲ್ಲಕಾಂಗ್ರೆಸ್ ನಿರಾಯಾಸವಾಗಿ ಮೊದಲ ಪಟ್ಟಿಯಲ್ಲಿ ಜಿಲ್ಲೆಯ 5 ಅಭ್ಯರ್ಥಿ ಗಳ ಹೆಸರನ್ನು ಘೋಷಿಸಿದ್ದರೆ, ಉಳಿದ ಮೂವರ ಹೆಸರು ಪ್ರಕಟಣೆಗೆ ವಿಳಂಬ ಮಾಡುತ್ತಿದೆ. ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ ಹಾಗೂ ಪುತ್ತೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಬೇಕಿದೆ. ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದ ಅಭ್ಯರ್ಥಿ ಅಂತಿಮಗೊಳ್ಳಬೇಕಿದೆ.