Advertisement

ಕಾರ್ನಾಡು: ಬಿಜೆಪಿ ಮಹಾ ಸಂಪರ್ಕ ಅಭಿಯಾನ

11:29 AM Apr 16, 2019 | Sriram |

ಮೂಲ್ಕಿ: ದೇಶದ ಐದು ವರ್ಷಗಳ ಆಡಳಿತವನ್ನು ಸಂಪೂರ್ಣವಾಗಿ ಜನರು ಕೊಟ್ಟ ಆಡಳಿತ ಎಂದು ಸಮರ್ಪಣೆ ಭಾವದಿಂದ ನಡೆಸಿ ನುಡಿಯುತ್ತಿರುವ ಮೋದಿ ಯವರಂತಹ ನಿಷ್ಕಳಂಕ ಹೋರಾಟಗಾರ ಪ್ರಧಾನಿ ನಮಗೆ ಮತ್ತೆ ಬೇಕಾ ಗಿದೆ. ಇದಕ್ಕಾಗಿ ಸರಕಾರದಲ್ಲಿ ನಮ್ಮ ಪ್ರತಿನಿಧಿಯಾಗಿ ಜನರಿಗಾಗಿ ಶ್ರಮಿಸುತ್ತಿರುವ ನಳಿನ್‌ ಕುಮಾರ್‌ ಕಟೀಲ್‌ ಅವ ರನ್ನು ಗೆಲ್ಲಿಸುವಲ್ಲಿ ನಾವೆಲ್ಲರೂ ಶ್ರಮ ಪಟ್ಟು ದುಡಿಯುವ ಎಂದು ಮೂಲ್ಕಿ ಶಕ್ತಿ ಕೇಂದ್ರದ ಪ್ರಮುಖ್‌ ಶೈಲೇಶ್‌ ಕುಮಾರ್‌ ಹೇಳಿದರು.

Advertisement

ಅವರು ಮೂಲ್ಕಿ ಕಾರ್ನಾಡು ಸದಾಶಿವ ನಗರದ ಬಿಜಾಪುರ ಕಾಲನಿಯಲ್ಲಿ ಮಹಾ ಸಂಪರ್ಕ ಅಭಿಯಾನದಲ್ಲಿ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮುಖಂಡರಾದ ವಿಟuಲ್‌ ಎಂ.ಎನ್‌., ವೀರಣ್ಣ ಅರಳಗುಂಡಿ, ಮಹೇಶ್‌ ಕುಮಾರ್‌, ಪ್ರಶಾಂತ್‌, ಶರಣ್‌ ವಾಲಿಕಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next