Advertisement

ಬಿಜೆಪಿ ಟಿಕೆಟ್‌ಗಾಗಿ ಕರಡಿ ಸಂಗಣ್ಣ ಮನವಿ

11:47 AM Apr 20, 2018 | Team Udayavani |

ಬೆಂಗಳೂರು: ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಬಯಸಿರುವ ಸಂಸದ ಕರಡಿ ಸಂಗಣ್ಣ  ಗುರುವಾರ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ನಗರದಲ್ಲಿರುವ ಅಮಿತ್‌ ಶಾ ನಿವಾಸಕ್ಕೆ ಆಗಮಿಸಿ ಕೆಲಹೊತ್ತು ಹೊರಗೆ ಕಾದು ನಿಂತಿದ್ದ ಕರಡಿ ಸಂಗಣ್ಣ ನಂತರ ಅಮಿತ್‌ ಅವರಿಗೆ ಸ್ಪರ್ಧೆಗೆ ಅವಕಾಶ ಕೊಡುವಂತೆ ಕೋರಿದರು.  

Advertisement

ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ಟಿಕೆಟ್‌ ನೀಡಿದರೆ ಜಿಲ್ಲೆಯ ನಾಲ್ಕೈದು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ. ಸರ್ಕಾರ ರಚನೆಗೆ ಸಂಖ್ಯಾಬಲ ಮುಖ್ಯ, ಹೀಗಾಗಿ, ಪಕ್ಷದ ಹಿತದೃಷ್ಟಿಯಿಂದ ಸ್ಪರ್ಧೆಗೆ ಅನುಮತಿ ಕೋರಿದ್ದೇನೆ ಎಂದು ಹೇಳಿದರು. ಈ ಮಧ್ಯೆ, ಸಂಜೆ ಬಿಜೆಪಿ ಕಚೇರಿ ಮುಂದೆ ಗಾಂಧಿನಗರ ಕ್ಷೇತ್ರದಿಂದ ಬಿ.ಬಿ.ಶಿವಪ್ಪ ಅವರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಿಜೆಪಿ ಕಚೇರಿಯಲ್ಲಿ ಪ್ರಮುಖ ನಾಯಕರ ಜತೆ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆಯಲ್ಲಿ ತೊಡಗಿದ್ದರು. ಹೊರಗೆ ಗಾಂಧಿನಗರದಿಂದ ಆಗಮಿಸಿದ್ದ ಶಿವಪ್ಪ ಬೆಂಬಲಿಗರು ಟಿಕೆಟ್‌ಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿ ಕೆಲಹೊತ್ತು ಧರಣಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next