Advertisement

ಧಾರಿವಾಲಾಗೂ ಸಿದ್ದರಾಮಯ್ಯಗೂ ಏನು ಸಂಬಂಧ? :ಅಶೋಕ್‌ 

02:02 PM Jan 03, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹೊಸ ಭೂ ಹಗರಣದ ಆರೋಪ ಮಾಡಿ  ದಾಖಲೆ ಬಿಡುಗಡೆ ಮಾಡಿದೆ. 

Advertisement

ಬುಧವಾರ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರ ನೇತೃತ್ವದಲ್ಲಿ  ಹಗರಣದ ಕುರಿತಾಗಿನ ದಾಖಲೆಗಳನ್ನು ಬಿಡುಗಡೆ ಮಾಡಿದೆ. 

2014 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಯನಗರದ ಸಿದ್ದಾಪುರ ಬಡಾವಣೆಯಲ್ಲಿ  200 ಕೋಟಿ ರೂ ಮೌಲ್ಯದ2 ಎಕರೆ 39 ಗುಂಟೆ ಜಮೀನನ್ನು ಅಶೋಕ್‌ ಧಾರಿವಾಲಾ  ಕಂಪೆನಿಗೆ ಡಿನೋಟಿಫೈ ಮಾಡಿ ನೀಡಿದ್ದಾರೆ ಎಂದು ಆರೋಪಿಸಿ ದಾಖಲೆ ಪ್ರದರ್ಶಿಸಿದರು. 

2014 ರಲ್ಲಿ ಜಗದೀಶ್‌ ಶೆಟ್ಟರ್‌ ಅವರ ನೇತೃತ್ವದ ಬಿಜೆಪಿ ಸರ್ಕಾರ ಡಿನೋಟಿಫೈ ಮಾಡಲು ಒಪ್ಪಿರಲಿಲ್ಲ. ಆದರೆ ಸಿದ್ದರಾಮಯ್ಯ ಅವರು ಡಿನೋಟಿಫೈ ಮಾಡಿ ಕೊಟ್ಟಿದ್ದಾರೆ. 

ಇಲ್ಲಿ  ರೀಡೂ ಮಾಡಲಾಗಿದೆ ತಕ್ಷಣ ಅದನ್ನು ಕೈ ಬಿಡಬೇಕು ಎಂದು ಆರ್‌ ಅಶೋಕ್‌ ಒತ್ತಾಯಿಸಿದರು. 

Advertisement

ಇದೇ ವೇಳೆ ಧಾರಿವಾಲಾಗೂ ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next