Advertisement

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

10:21 PM Aug 02, 2021 | Team Udayavani |

ಪಾಟ್ನಾ: 2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದಿದ್ದರೆ, ಜೆಡಿಯು ಜತೆ ಮೈತ್ರಿ ಮಾಡಿಕೊಳ್ಳಬೇಕಾದ ಅಗತ್ಯವೇ ಇರಲಿಲ್ಲ ಎಂದು ಹೇಳಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಬಿಹಾರ ಸಚಿವ, ಬಿಜೆಪಿ ನಾಯಕ ಸಾಮ್ರಾಟ್‌ ಚೌಧರಿ ಈಗ ಮತ್ತೆ ಮೈತ್ರಿ ವಿಚಾರ ಪ್ರಸ್ತಾಪಿಸಿದ್ದಾರೆ.

Advertisement

ಔರಂಗಾಬಾದ್‌ನಲ್ಲಿ ಜನತಾ ಯುವ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿಗೆ 74 ಸೀಟುಗಳು ಬಂದಿದ್ದರೂ, ಕೇವಲ 43 ಸೀಟುಗಳಲ್ಲಿ ಜಯಗಳಿಸಿದ ಜೆಡಿಯು ನಾಯಕ ನಿತೀಶ್‌ ಕುಮಾರ್‌ರನ್ನು ಸಿಎಂ ಮಾಡಲಾಯಿತು. ಭಿನ್ನ ಸಿದ್ಧಾಂತಗಳಿರುವ 4 ಪಕ್ಷಗಳು ಎನ್‌ಡಿಎಯಲ್ಲಿವೆ. ಹೀಗಿರುವಾಗ ನಾವು ಸಾಕಷ್ಟು ವಿಚಾರಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದೂ ಚೌಧರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next