Advertisement

ಬಿಟ್‌ ಕಾಯಿನ್‌: ಲಕ್ಷಾಂತರ ರೂ.ವಂಚನೆ

01:25 AM Apr 12, 2023 | Team Udayavani |

ಉಡುಪಿ: ಬಿಟ್‌ ಕಾಯಿನ್‌ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ.ವಂಚಿಸಿದ ಘಟನೆ ನಡೆದಿದೆ.

Advertisement

ಆತ್ರೇಯ ಆಚಾರ್ಯ ಅವರಿಗೆ ತುಷಾರ್‌ ಕಪೂರ್‌ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡು ಬಿಟ್‌ ಕಾಯಿನ್‌ನಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಅತೀ ಲಾಭ ಬರುತ್ತದೆ ಎಂದು ಆಸೆ ತೋರಿಸಿದ್ದ.

ಅದರಂತೆ ಆತ್ರೇಯ ಅವರು ಮಾ. 19ರಿಂದ ಎ. 9ರ ನಡುವೆ ಆರೋಪಿ ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ 25,52,300 ರೂ.ಗಳನ್ನು ವರ್ಗಾವಣೆ ಮಾಡಿದ್ದರು. ಬಳಿಕ ಬಿಟ್‌ ಕಾಯಿನ್‌ ನೀಡದೆ ಮೋಸ ಮಾಡಿದ್ದಾನೆ ಎಂದು ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next