Advertisement

ಮಂಗಳೂರು ನಗರದಲ್ಲಿ ಪ್ರತ್ಯಕ್ಷವಾದ ಕಾಡುಕೋಣ: ಭಯಭೀತರಾದ ಜನತೆ

08:08 AM May 06, 2020 | keerthan |

ಮಂಗಳೂರು: ಲಾಕ್ ಡೌನ್ ಸ್ವಲ್ಪ ಮಟ್ಟಿಗೆ ತೆರವು ಮಾಡಿರುವ ಕಾರಣ ಜನರು ನಿಧಾನವಾಗಿ ಮನೆಯಿಂದ ಹೊರಬರುತ್ತಿದ್ದಾರೆ. ಆದರೆ ಇಂದು ಕಾಡುಕೋಣವೊಂದು ನಗರದೊಳಗೆ ಕಾಲಿಟ್ಟು ಜನರು ಭಯಭೀತರಾಗುವಂತೆ ಮಾಡಿದೆ.

Advertisement

ಇಂದು ಮುಂಜಾನೆ ವೇಳೆಗೆ ನಗರದ ಹ್ಯಾಟ್ ಹಿಲ್ ಬಳಿ ಕಾಡುಕೋಣವೊಂದು ಕಾಣಿಸಿಕೊಂಡಿದೆ. ಏಕಾಏಕಿ ನಗರದೊಳಗೆ ಕಾಡುಕೋಣ ಕಂಡ ಜನರು ಭಯಭೀತರಾಗಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಅಗಮಿಸಿದ ಅರಣ್ಯ ಇಲಾಖೆಯ ತಂಡ ನಗರ ಸಂಚಾರಕ್ಕೆ ಬಂದ ಕಾಟಿಯನ್ನು ಹಿಡಿಯುವ ಕಾರ್ಯಚರಣೆಗೆ ಮುಂದಾಗಿದ್ದಾರೆ.

ಸುಮಾರು 40 ದಿನಗಳಿಂದ ಲಾಕ್ ಡೌನ್ ಅಗಿರುವ ಕಾರಣ ಜನ ಸಂಚಾರವಿಲ್ಲದ ನಗರದೊಳಗೆ ಈ ಒಂಟಿ ಕಾಟಿ ಪ್ರವೇಶ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಮಂಗಳೂರು ವಿಮಾನ ನಿಲ್ದಾಣದ ಪಕ್ಕ ಬಜ್ಪೆ, ಅದ್ಯಪಾಡಿ ಅರಣ್ಯ  ಪ್ರದೇಶದ ಸುತ್ತಮುತ್ತಲೂ ಕಾಡುಕೋಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು. ಅಲ್ಲಿಂದ ಬಂದಿರುವ ಸಾಧ್ಯತೆ ಇರಬಹುದೆಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next