Advertisement

8ನೇ ಕೋಟಿ ಎಲ್ಪಿಜಿ ಸಿಕ್ಕವಳಿಗೆ ಬಿರಿಯಾನಿ ಆಸೆ!

11:19 AM Sep 10, 2019 | Team Udayavani |

ಮುಂಬಯಿ:ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 8 ಕೋಟಿ ಎಲ್ಪಿಜಿ ಸಂಪರ್ಕವನ್ನು ಉಚಿತವಾಗಿ ಒದಗಿಸಲಾಗಿದ್ದು, ಈ ಪೈಕಿ ಕೊನೆಯ ಅಂದರೆ 8ನೇ ಕೋಟಿ ಸಂಪರ್ಕವನ್ನು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿನ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಎಲ್ಪಿಜಿ ಸಂಪರ್ಕ ವನ್ನು ಹಸ್ತಾಂತ ರಿಸಿದ್ದಾರೆ.

Advertisement

ಶನಿವಾರ ಔರಂಗಾಬಾದ್‌ನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಇದರ ಫ‌ಲಾನುಭವಿ ಆಯೇಶಾ ಮತ್ತು ರಫೀಕ್‌ ಶೇಖ್‌. ಎಲ್ಪಿಜಿ ಸಂಪರ್ಕ ಪಡೆಯುತ್ತಿದ್ದಂತೆ ಮೊದಲು ನಾನು ಬಿರಿಯಾನಿ ತಯಾರಿಸಬೇಕು ಎಂದು ಆಯೇಶಾ ಹೇಳಿಕೊಂಡಿದ್ದಾರೆ. ಈ ಎಲ್ಪಿಜಿಯಿಂದಾಗಿ ನಾನು ಬೇಗ ಕೆಲಸಕ್ಕೆ ಹೋಗಬಹುದು. ಹೆಚ್ಚು ಹೊತ್ತು ಕೆಲಸ ಮಾಡಬಹುದು. ಅಡುಗೆ ಕೆಲಸ ಬೇಗ ಮುಗಿಸಬಹುದಾಗಿದೆ ಎಂದಿದ್ದಾರೆ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ದಂಪತಿ, ಎಲ್ಪಿಜಿ ಸಂಪರ್ಕದಿಂದ ಖುಷಿಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next