Advertisement

ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಜನ್ಮ ದಿನೋತ್ಸವ

12:27 AM Nov 26, 2019 | sudhir |

ಗೋಣಿಕೊಪ್ಪಲು: ಶಾಫಿ ಮುಸ್ಲಿಂ ಜಮಾಅತ್‌ ಇವರ ವತಿಯಿಂದ ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ 1461 ಜನ್ಮ ದಿನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

Advertisement

ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಪಟ್ಟಣದ ಜುಮಾ ಮಸೀದಿಯವರೆಗೆ ಮೆರವಣಿಗೆ ನಡೆಸಿ ಮೊಹಮ್ಮದ್‌ ಪೈಗಂಬರ್‌ರವರ ಸಂದೇಶವನ್ನು ಸಾರಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಮುಸ್ಲಿಮರು ಮೆರವಣಿಗೆಯಲ್ಲಿ ಭಾಗವಹಿಸಿದರು.

ಹಾಡು, ನೃತ್ಯಗಳ ಮೂಲಕ ಪ್ರವಾದಿ ಮೊಹಮ್ಮದ್‌ರ ಜೀವನ ಬಗ್ಗೆ ಅರಿವು ಮೂಡಿಸಿದರು. ಮೆರವಣಿಗೆ ಸಂದರ್ಭ ಪಟ್ಟಣದ ಹಿಂದೂಪರ ಸಂಘಟನೆಗಳು ಪಾಯಸ ವಿತರಿಸುವ ಮೂಲಕ ಸ್ನೇಹ ಬಾಂಧವ್ಯವನ್ನು ಗಟ್ಟಿಗೊಳಿಸಿದರು.

ಇದೇ ಸಂದರ್ಭ ಕ್ರೈಸ್ತ ಸಮುದಾಯದವರು ಕುಡಿಯುವ ನೀರನ್ನು ನೀಡಿ ಬಿಸಿಲಿನಲ್ಲಿ ನಡೆದು ಬಂದವರ ಬಾಯಾರಿಕೆಯನ್ನು ನೀಗಿಸಿದರು. ಗೋಣಿಕೊಪ್ಪಲು ಶಾಫಿ ಮುಸ್ಲಿಂ ಜಮಾಹತ್‌ ಅಧ್ಯಕ್ಷ ಬಷೀರ್‌ ಹಾಜಿ, ಕಾರ್ಯದರ್ಶಿ ಹಕೀಂ, ಸಂಚಾಲಕ ಪಿ.ಎ. ರಷೀದ್‌, ಉಸ್ತಾದ್‌ ತಂಲಿಕ್‌ ದಾರಿಮಿ ಸೇರಿದಂತೆ ಪ್ರಮುಖರು ಹಾಜರಿದ್ದರು. ಸಿಹಿ ವಿತರಿಸುವ ಸಂದರ್ಭ ಹಿಂದೂಪರ ಸಂಘಟನೆಯ ಸುರೇಶ್‌ ರೈ, ರಾಜೇಶ್‌, ಭರತ್‌, ಮಂಜು, ಪುನೀತ್‌, ಕಿಶೋರ್‌, ಸತೀಶ್‌, ವೇಣು, ರವೀಂದ್ರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next