Advertisement

ಹೊರರಾಜ್ಯದ ಗುತ್ತಿಗೆದಾರರ ಬಿಲ್‌ ಮಂಜೂರು: ‘ಪೇ ಡಿಸಿಎಂ’ ಎಂದ ಯತ್ನಾಳ್‌

11:50 PM Dec 08, 2023 | Team Udayavani |

ಬೆಳಗಾವಿ: ನಮ್ಮ ರಾಜ್ಯದ ಗುತ್ತಿಗೆದಾರರಿಗೆ ಬಿಲ್‌ ಮಂಜೂರು ಮಾಡದ ಸರಕಾರ, ಆಂಧ್ರಪ್ರದೇಶ ಸಹಿತ ಹೊರರಾಜ್ಯಗಳ ಗುತ್ತಿಗೆದಾರರ ಬಿಲ್‌ಗ‌ಳಿಗೆ ಮಂಜೂರಾತಿ ನೀಡುತ್ತಿದೆ. ಇದು “ಪೇ ಡಿಸಿಎಂ ಸರಕಾರ’ ಎಂದು ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದರು.

Advertisement

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು, ರಾಜ್ಯದ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಸರಕಾರ ಕೆಲಸ ಮಾಡಿಸಿಕೊಂಡು ಬಿಲ್‌ ಪಾವತಿಸುತ್ತಿಲ್ಲ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಿದೆ ಎಂದು ಬೇಸರ ವ್ಯಕ್ತಪಡಿಸಿದರು. ಗುತ್ತಿಗೆದಾರರಿಗೆ ಸರಕಾರ ಬಾಕಿ ಬಿಲ್‌ ಪಾವತಿಸದೆ ಇರುವುದರಿಂದ ಜಿಎಸ್‌ಟಿ ಕೂಡ ಕಟ್ಟಲಾಗುತ್ತಿಲ್ಲ. 1,200 ಕೋಟಿ ರೂ. ಜಿಎಸ್‌ಟಿ ಬಾಕಿ ಇದ್ದು, ಸಂಬಂಧಿಸಿದ ಇಲಾಖೆಯು ಗುತ್ತಿಗೆದಾರರಿಗೆ ನೋಟಿಸ್‌ ಜಾರಿಗೊಳಿಸುತ್ತಿದೆ. ಸಾಲ ಮಾಡಿ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ಆಸ್ತಿಯೇ ಜಪ್ತಿ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ವಿರುದ್ಧ ಪೇ ಸಿಎಂ ಅಭಿಯಾನ ಮಾಡಿದ್ದರು. ಅದಕ್ಕಿಂತ ದೊಡ್ಡ ಹಗರಣ ಈ ಸರಕಾರದಲ್ಲಿ ನಡೆದಿದೆ. ಶೇ.80ರಷ್ಟು ಕಮಿಷನ್‌ ನಡೆಯುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿದರಲ್ಲದೆ, ಸಚಿವ ಎಚ್‌.ಕೆ. ಪಾಟೀಲ್‌ ಮಾತನಾಡಿ, ಈ ರೀತಿ ರಾಜಕೀಯ ಪ್ರೇರಿತವಾಗಿ ಮಾತನಾಡುವುದು ಸರಿಯಲ್ಲ ಎಂದು ಸುಮ್ಮನಾಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next