Advertisement

ಮುಳಗುಂದ: ಅನಿಲ ಭಿಕ್ಷಾ ಅಭಿಯಾನಕ್ಕೆ ಸ್ವಾಗತ

04:47 PM May 06, 2020 | Suhan S |

ಮುಳಗುಂದ: ಹಲವಾರು ಹಳ್ಳಿಗಳಲ್ಲಿ ಮನುಕುಲ ಕಲ್ಯಾಣಕ್ಕಾಗಿ ಜೋಳಿಗೆ ಹಿಡಿದ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಚಿಂಚಲಿ ಗ್ರಾಮಕ್ಕೆ ಆಗಮಿಸಿದಾಗ ಅನಿಲ ಅಭಿಮಾನಿ ಬಳಗದ ಶರಣಪ್ಪ ಕಮ್ಮಾರ ಗ್ರಾಮದ ಹೊರ ವಲಯದಲ್ಲಿ ದೀಡ್‌ನಮಸ್ಕಾರ ಹಾಕುವುದರೊಂದಿಗೆ ಅನಿಲ ಭಿಕ್ಷಾ ಅಭಿಯಾನವನ್ನು ಸ್ವಾಗತಿಸಿಕೊಂಡರು.

Advertisement

ಸದಾನಂದ ಕಮ್ಮಾರ ದಂಪತಿ ಮನೆಗೆ ಭೇಟಿ ನೀಡಿದ ಅನಿಲ ಮೆಣಸಿನಕಾಯಿ ಅವರಿಗೆ ಆರತಿ ಬೆಳಗಿ ಸನ್ಮಾನಿಸಿ ಅನಿಲ ಅಕ್ಷಯ ಜೋಳಿಗೆಗೆ ದವಸಧಾನ್ಯಗಳನ್ನು ನೀಡಿದರು. ನಂತರ ಚನ್ನಯ್ಯ  ನಂದಿಕೋಲಮಠ, ಗ್ರಾಪಂ ಸದಸ್ಯ ಮುತ್ತಪ್ಪ ಸಂದಕದ ಅವರ ಮನೆಗೆ ತೆರಳಿದಾಗ ಅಲ್ಲಿಯೂ ಆಧರಾದಿತ್ಯದಿಂದ ಬರಮಾಡಿಕೊಂಡು ದವಸಧಾನ್ಯಗಳನ್ನು ನೀಡಿದರು. ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಬಡವರಿಗಾಗಿ ಭಿಕ್ಷಾ ಅಭಿಯಾನದ ಮೂಲಕ ರೈತರು, ದಾನಿಗಳಿಂದ ಸಂಗ್ರಹಿಸಿದ ದವಸಧಾನ್ಯಗಳನ್ನು ಈಗಾಗಲೇ 15 ಸಾವಿರಕ್ಕೂ ಅ ಧಿಕ ದಿನಸಿ ಕಿಟ್‌ಗಳನ್ನು ಮಾಡಿ ಎಲ್ಲ ಬಡವರಿಗೆ ವಿತರಿಸಲಾಗಿದೆ ಎಂದರು.

ಮಂಜುನಾಥ ಹೂಗಾರ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಾಂತಿಲಾಲ ಬನಸಾಲಿ ಮಾತನಾಡಿದರು. ಧ್ಯಾಮಣ್ಣ ನೀಲಗುಂದ, ಮಹೇಶ ದಾಸರ, ಪರಮೇಶಿ ನಾಯಕ, ಬಸವಣ್ಣೆಯ್ಯ ಹಿರೇಮಠ, ಸದಾನಂದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next