Advertisement

ಬೈಕ್ ಅಪಘಾತ: ಶ್ರೀಶೈಲಕ್ಕೆ ಹೋಗುತ್ತಿದ್ದ ಇಬ್ಬರು ಭಕ್ತರು ಸ್ಥಳದಲ್ಲೇ ಸಾವು

03:00 PM Apr 11, 2021 | Team Udayavani |

ಬನಹಟ್ಟಿ (ಬಾಗಲಕೋಟೆ): ಬನಹಟ್ಟಿಯಿಂದ ಶ್ರೀಶೈಲಕ್ಕೆ ಬೈಕ್ ಮೂಲಕ ಹೋಗುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ತಡರಾತ್ರಿ ಲಿಂಗಸೂಗೂರು ತಾಲೂಕಿನ ಮುದಗಲ್ ಸಮೀಪದ ಆಂದ್ಯಾಳ ಗ್ರಾಮದ ಪ್ರಮುಖ ರಸ್ತೆಯಲ್ಲಿ ನಡೆದಿದೆ.

Advertisement

ಬನಹಟ್ಟಿ ಅಶೋಕ ಕಲೋನಿಯ ನಿವಾಸಿ ಚನಮಲ್ಲಯ್ಯ ಗುರುಪಾದಯ್ಯ ಹುಣಶ್ಯಾಳಮಠ (40)ಮೃತಪಟ್ಟ ಬೈಕ್ ಸವಾರ. ಬೈಕ್ ಹಿಂದೆ ಕುಳಿದ ಇನ್ನೋರ್ವ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ.

ಇವರು ಶನಿವಾರ ಮಧ್ಯಾಹ್ನ ಬೈಕ್ ನಲ್ಲಿ ಶ್ರೀಶೈಲಕ್ಕೆ ಹೊರಟಿದ್ದರು. ಆಂದ್ಯಾಳ ಗ್ರಾಮದ ಪ್ರಮುಖ ರಸ್ತೆಯಲ್ಲಿ ಲಾರಿ ಗಾಲಿಗೆ ಬೈಕ್ ಸಮೇತ ಸಿಲುಕಿ ಸ್ಥಳದಲ್ಲಿಯೇ ಇಬ್ಬರೂ ಸಾವನ್ನಪ್ಪಿದ್ದಾರೆ.

ಮೃತ ಚನಮಲ್ಲಯ್ಯ ನ ಶರ್ಟ್ ನ ಜೇಬಿನಲ್ಲಿ ಲೈಸನ್ಸ್ ಮತ್ತು ಗುರುತಿನ ಪತ್ರ ಹಾಗೂ ಮೋಬಾಯಿಲ ಮೂಲಕ ವಿಳಾಸ ಗೊತ್ತಾಗಿ ಮುದಗಲ್ ಪೊಲೀಸ್ ಠಾಣೆಯಿಂದ ಬನಹಟ್ಟಿಯ ಅವರ ಕುಟುಂಬಕ್ಕೆ ಮಾಹಿತಿ ತಿಳಿಸಿದ್ದಾರೆ.

ಮೃತ ಚನಮಲ್ಲಯ್ಯ ನೇಕಾರಿಕೆ ವೃತ್ತಿ ಮಾಡುತ್ತಿದ್ದ, ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next