Advertisement

ತಲ್ವಾರ್‌ ಹಿಡಿದು ಬೈಕ್‌ ವ್ಹೀಲಿಂಗ್‌

03:43 PM Nov 28, 2021 | Team Udayavani |

ಚನ್ನರಾಯಪಟ್ಟಣ: ಪಟ್ಟಣದ ಅಗ್ನಿಶಾಮಕದ ಮುಂಭಾಗದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರು ಬೈಕ್‌ ವ್ಹೀಲಿಂಗ್‌ ಮಾಡುವ ಜೊತೆಗೆ ಕೈಯಲ್ಲಿ ಮಾರಕಾಸ್ತ್ರವನ್ನು ಹಿಡಿದು ಪುಂಡಾಟಿಕೆ ಮೆರೆದಿರುವುದು ಸಾರ್ವಜನಿಕರಿಗೆ ಆತಂಕ ಉಂಟಾಗಿದೆ.

Advertisement

ಗುತ್ತಿಗೆದಾರರ ಸಂಘದ ಕಟ್ಟಡದ ಸಮೀಪದಿಂದ ರಿಲಯನ್ಸ್‌ ಪೆಟ್ರೋಲ್‌ ಬಂಕ್‌ ಮೂಲಕ ಪಟ್ಟಣ ಪ್ರವೇಶಿಸುವ ಮೂರು ಬೈಕ್‌ನಲ್ಲಿ ಐದು ಮಂದಿ ಪುಂಡರ ಗುಂಪಿನಲ್ಲಿ ಒಂದು ಬೈಕಿನಲ್ಲಿ ಹಿಂಬದಿ ಸವಾರನ ಕೈಯಲ್ಲಿ ತಲ್ವಾರ್‌ ಹಿಡಿದ ಸಂಚರಿಸುತ್ತಿದ್ದರೆ, ಪದಾಚಾರಿಗಳು ಭಯದಿಂದ ಮೌನಕ್ಕೆ ಶರಣಾಗಿದ್ದಾರೆ. ಇದರಲ್ಲಿ ಕೆಲವರು ವಿಡಿಯೋ ಮಾಡಿ, ಸಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಹಾಡಹಗಲಿನಲ್ಲಿ ಈ ರೀತಿ ತಲ್ವಾರ ಹಿಡಿದು ಸಾರ್ವಜನಿಕರ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರು, ಬೈಕಿನಲ್ಲಿ ಸಂಚಾರ ಮಾಡುವ ದೃಶ್ಯ ನೋಡಿದ ಜನತೆ ಭಯದಲ್ಲಿದ್ದು, ಮಹಿಳೆಯರು ಹಾಗೂ ಯುವತಿಯರು ಸಂಚಾರ ಮಾಡುವುದು ಹೇಗ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಆಗಾಗ ಸಾಭೀತಾಗುತ್ತಿದ್ದರೂ ಪೊಲೀಸರು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ.ವಿಡಿಯೋ ನೋಡಿದ ಮೇಲಾದರವು ಪೊಲೀಸರು ಎಚ್ಚೆತ್ತುಕೊಂಡು ಪುಂಡರ ಹೆಡೆಮುರಿ ಕಟ್ಟಲು ಮುಂದಾಗದಿದ್ದರೆ ತಾಲೂಕಿನಲ್ಲಿ ಗೌರವಯುತವಾಗಿ ಬದುಕುವುದು ಕಷ್ಟವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next