Advertisement

Road mishap: ಬೈಕಿಗೆ ಮತ್ತೊಂದು ಬೈಕ್‌ ಢಿಕ್ಕಿ ಹೊಡೆದು ಪರಾರಿ

07:44 PM Apr 04, 2024 | Team Udayavani |

ಬಂಟ್ವಾಳ: ಬಂಟ್ವಾಳದ ಭಂಡಾರಿಬೆಟ್ಟಿನಲ್ಲಿ ಎ. 2ರಂದು ಬೈಕೊಂದು ಮತ್ತೂಂದು ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಘಟನೆಯಲ್ಲಿ ಸಹಸವಾರ ಗಾಯಗೊಂಡಿದ್ದಾರೆ.

Advertisement

ಪಿಲಾತಬೆಟ್ಟು ಗ್ರಾಮ ನಿವಾಸಿ ಪ್ರವೀಣ್‌ಕುಮಾರ್‌ ಅವರು ತಮ್ಮ ಬೈಕಿನಲ್ಲಿ ಜಯಾನಂದ ಅವರನ್ನು ಕುಳ್ಳಿರಿಸಿಕೊಂಡು ಮೇರಮಜಲಿನಿಂದ ಪಿಲಾತಬೆಟ್ಟು ಕಡೆಗೆ ತೆರಳುತ್ತಿದ್ದ ಸಂದರ್ಭ ಸವಾರನೋರ್ವ ಬೈಕನ್ನು ದುಡುಕುತನ ಹಾಗೂ ನಿರ್ಲಕ್ಷÂತನದಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಸಹಸವಾರ ಜಯಾನಂದ ಗಾಯಗೊಂಡು ಬಿ.ಸಿ.ರೋಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next