Advertisement

Aranthodu ಕಾರು-ಬೈಕ್‌ ಅಪಘಾತದಲ್ಲಿ ಬೈಕ್‌ ಸವಾರ ಸಾವು

10:49 PM Feb 27, 2024 | Team Udayavani |

ಅರಂತೋಡು: ಕಾರಿನ ಹಿಂಬದಿಗೆ ಬೈಕ್‌ ಢಿಕ್ಕಿ ಹೊಡೆದು ತಲೆಗೆ ಗಂಭೀ ಗಾಯಗೊಂಡ ಪರಮೇಶ್ವರ (49)ಎಂಬವರು ಆಸ್ಪತ್ರೆಯಲ್ಲಿ ಮೃತಪಟ್ಟ ಮಂಗಳವಾರ ವರದಿಯಾಗಿದೆ.

Advertisement

ಆಲೆಟ್ಟಿ ಗ್ರಾಮದ ಅರಂಬೂರು ಎಂಬಲ್ಲಿ ಬೈಕಿನಿಂದ ರಸ್ತೆಗೆ ಎಸೆಯಲ್ಪಟ್ಟು, ಖಾಸಗಿ ಟೂರಿಸ್ಟ್ ಬಸ್‌ ನ ಅಡಿಗೆ ತಲೆ ಸಿಲುಕಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಪರಮೇಶ್ವರ ಅವರನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯದ ಸರ್ಕಾರಿ ಆಸ್ಪತ್ರೆಯ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಂಪಾಜೆ ಗ್ರಾಮದ ದೊಡ್ಡಡ್ಕ ನಿವಾಸಿಯಾಗಿರುವ ಪರಮೇಶ್ವರ ಅವರು ಸುಳ್ಯದ ಗಾಂಧಿನಗರದಲ್ಲಿ ಕಬ್ಬಿಣದ ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಪತ್ನಿ ನಳಿನಿ, ಪುತ್ರ ಧನುಷ್‌, ಪುತ್ರಿ ಧನ್ವಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next