Advertisement

ಬೈಕ್ ಪಾರ್ಕ್ ನೆಪದಲ್ಲಿ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

03:26 PM Sep 02, 2020 | keerthan |

ರಾಯಚೂರು: ಬೈಕ್ ಪಾರ್ಕ್ ನೆಪದಲ್ಲಿ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ರಾಯಚೂರಿನಲ್ಲಿ ನಡೆದಿದೆ.

Advertisement

ನಗರದ ಪಾರ್ ಕೋಟ್ ಬಡಾವಣೆ ನಿವಾಸಿ ಸಲ್ಮಾನ್ ಮಹೆಬೂಬ (28) ಹತ್ಯೆಗೀಡಾದ ವ್ಯಕ್ತಿ. ಮಂಗಳವಾರ ತಡರಾತ್ರಿ ಗಂಗಾ ನಿವಾಸದ ಬಳಿ ಬೈಕ್ ನಿಲ್ಲಿಸುವ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ.

ನಾಲ್ವರ ದುಷ್ಕರ್ಮಿಗಳ ಗುಂಪು ಸಲ್ಮಾನ್ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸದರ್‌ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಬಳಿಕ ಘಟನೆಗೆ ನಿಖರ‌ ಕಾರಣ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.

ದುರ್ಷ್ಕಮಿಗಳು ಪರಾರಿಯಾಗಿದ್ದು, ಮೃತನ ಪತ್ನಿ ನಾಲ್ವರ ವಿರುದ್ಧ‌ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next