Advertisement

ತೊಕ್ಕೊಟ್ಟು ಬಳಿ ಕಾರು, ಬೈಕ್ ಅಪಘಾತ : ಬೈಕ್ ಸವಾರರು ಗಂಭೀರ

07:31 PM Jul 19, 2020 | sudhir |

ಉಳ್ಳಾಲ: ಬೈಕ್ ಕಾರು ನಡುವೆ ಸಂಭವಿಸಿದ ಅಪಘಾತ ದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ಬಳಿ ಭಾನುವಾರ ಸಂಭವಿಸಿದೆ

Advertisement

ಚೆಂಬುಗುಡ್ಡೆ ನಿವಾಸಿಗಳಾದ ಚರಣ್ ಮತ್ತು ಮಂಜುನಾಥ್ ಗಂಭೀರವಾಗಿ ಗಾಯಗೊಂಡವರು. ಕೂಲಿ ಕಾರ್ಮಿಕರಾಗಿದ್ದ ಇಬ್ಬರು ಬೈಕಿನಲ್ಲಿ ತೊಕ್ಕೊಟ್ಟು ಕಡೆಯಿಂದ ತಲಪಾಡಿ ಕಡೆಗೆ ತೆರಳುತ್ತಿದ್ದ ಸಂದರ್ಭ ಮುಂದಿನಿಂದ ಇದ್ದ ಕಾರು ಅವೈಜ್ಞಾನಿಕ ತಿರುವಿನಲ್ಲಿ ಬಲಭಾಗಕ್ಕೆ ತಿರುಗಲು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಬೈಕ್ ಢಿಕ್ಕಿ ಹೊಡೆದಿದೆ.

ಕಾರು ಚಾಲಕ ಮಹಮ್ಮದ್ ಅಜ್ಮಲ್ ಎಂಬವರ ವಿರುದ್ಧ ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಘಾತಕ್ಕೆ ಕಾರಣವಾಗುತ್ತಿರುವ ಅವೈಜ್ಞಾನಿಕ ತಿರುವು : ಏಕಮುಖ ಸಂಚಾರ ಇರುವ ಹೆದ್ದಾರಿಯಲ್ಲಿ ಓವರ್ ಬ್ರಿಡ್ಜ್ ಬಳಿ ಉಳ್ಳಾಲಕ್ಕೆ ಸಂಚರಿಸುವ ವಾಹನಗಳನ್ನು ಕಾಪಿಕಾಡು ಬಳಿ ತಿರುವಿಗೆ ಅವಕಾಶ ಮಾಡಿಕೊಡಲು ಹೆದ್ದಾರಿ ಕಾಮಗಾರಿ ನಡೆಸುವ ಸಂಸ್ಥೆ ಡಿವೈಡರ್ ತೆಗೆದಿದ್ದು, ಇದೀಗ ಕುಂಪಲ ಕಾಪಿಕಾಡು ಕಡೆಯಿಂದ ಏಕುಮುಖ ಸಂಚಾರದಿಂದ ಬರುವ ವಾಹನಗಳು ಈ ಅವೈಜ್ಞಾನಿಕ ತಿರುವಿನಲ್ಲಿ ಸಂಚಾರ ನಡೆಸುವುದರಿಂದ ಅಪಘಾತಗಳು ಹೆಚ್ಚುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next