Advertisement

ಬೈಕ್‌ ಹಿಂಬದಿ ಸವಾರಿ ನಿಷೇಧ: ಶೀಘ್ರ ಅರ್ಜಿ

07:10 AM Nov 02, 2017 | |

ರಾಯಚೂರು: 100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳಲ್ಲಿ ಹಿಂಬದಿ ಸವಾರಿ ನಿಷೇಧಿಸಿ ಹೈಕೋರ್ಟ್‌
ಆದೇಶ ಹೊರಡಿಸಿದ್ದು, ಈ ತೀರ್ಪು ಮರು ಪರಿಶೀಲಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಘಾತ ವಾದಾಗ ಬೈಕ್‌ ಸವಾರನಿಗೆ ವಿಮೆ ಹಣ ಪಾವತಿಸುವ ಬದಲು ವಿಮಾ ಸಂಸ್ಥೆ ನ್ಯಾಯಾಲಯದ ಎದುರು 100 ಸಿಸಿ ಬೈಕ್‌ನಲ್ಲಿ ಇಬ್ಬರು ಓಡಾಡುವಂತಿಲ್ಲ ಎಂಬ ಕಾಯ್ದೆ ಉಲ್ಲೇಖೀಸಿ ವಾದಿಸಿತ್ತು. ಇದರಿಂದ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಕರ್ನಾಟಕ ಹೊರತಾಗಿಸಿ ದೇಶದ ಬೇರೆ ಯಾವ ರಾಜ್ಯದಲ್ಲೂ ಇಂಥ ಕಾನೂನು ಇಲ್ಲ ಎಂದರು.

ಖಾಸಗಿ ಬಸ್‌ಗಳ ಹಾವಳಿಯಿಂದ ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಧಕ್ಕೆಯಾಗಿದೆ. ಖಾಸಗಿಯವರು ಪ್ರಯಾಣಿಕರಿಂದ ಬೇಕಾ ಬಿಟ್ಟಿ ಹಣ ಪಡೆಯುತ್ತಿರುವ ವಿಚಾರ ಗಮನಕ್ಕಿದೆ. ದರ ನೀತಿಗೆ ಕಡಿವಾಣ ಹಾಕಲು ಚಿಂತನೆ ನಡೆಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next