Advertisement

Kushtagi ಬೈಕ್‌ ಅಪಘಾತ; ಯರಿಗೋನಾಳ ಗ್ರಾಮದ ಯೋಧ ಸಾವು

10:11 PM Dec 22, 2023 | Team Udayavani |

ಕುಷ್ಟಗಿ: ತಾಲೂಕಿನ ಯರಿಗೋನಾಳ ಗ್ರಾಮದ ಸಿಆರ್‌ಪಿಎಫ್‌ ಯೋಧ ರಜೆಗೆ ಆಗಮಿಸಿದ್ದ ವೇಳೆ ಗುರುವಾರ ತಡರಾತ್ರಿ ಬೈಕ್‌ ಅಪಘಾತದಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಮೃತ ಯೋಧ ಸುರೇಶ ವಜ್ರದ (33) ಪತ್ನಿಯನ್ನು ಬಾದಾಮಿ ತಾಲೂಕಿನ ಮುಷಿಗೇರಿಗೆ ಕಳುಹಿಸಿ ಬರುವಾಗ ಕರಡಿಗುಡ್ಡದ ಬಳಿ ಬೈಕ್‌ ದುರಂತದಲ್ಲಿ ಮೃತಪಟ್ಟಿದ್ದಾರೆ. ಮೃತ ಯೋಧ ಪತ್ನಿ, ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ.

ಮೃತ ಯೋಧ ಸುರೇಶ ವಜ್ರದ 2012ರಲ್ಲಿ ಭಾರತೀಯ ಸೇನೆ ಸೇರಿದ್ದರು. ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ ಹೈದ್ರಾಬಾದ್‌ಗೆ ವರ್ಗವಾಗಿ ಕಾನ್‌ಸ್ಟೆàಬಲ್‌ ಜಿಡಿ 2ನೇ ಬಟಾಲಿಯನ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು. ಕಳೆದ ಸೋಮವಾರವಷ್ಟೇ ರಜೆ ಮೇರೆಗೆ ಸ್ವಗ್ರಾಮಕ್ಕೆ ಆಗಮಿಸಿದ್ದರು.

ಶುಕ್ರವಾರ ಸಂಜೆ ಗ್ರಾಮಸ್ಥರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಿತು. ಯೋಧನ ಅಕಾಲಿಕ ಸಾವಿಗೆ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ನಾಪುರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next