Advertisement

Bike accident: ಅಲ್ಬಾಡಿಯಲ್ಲಿ ಬೈಕ್‌ ಅಪಘಾತ; ಯುವಕ ಸಾವು

07:43 PM May 30, 2024 | Team Udayavani |

ಸಿದ್ದಾಪುರ: ಹಾಲಾಡಿ-ಸೋಮೇಶ್ವರ ರಸ್ತೆಯ ಅಲಾºಡಿಯ ಶಾಮಿಯಾನ ಅಂಗಡಿಯ ಬಳಿ ಅಡ್ಡ ಬಂದ ದನಯೊಂದಕ್ಕೆ ಬೈಕ್‌ ಡಿಕ್ಕಿ ಹೊಡೆಸಿ, ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಯುವಕ ಮೃತಪಟ್ಟ ಘಟನೆ ಮೇ 29ರಂದು ಜರಗಿದೆ.

Advertisement

ಗಂಭೀರವಾಗಿ ಗಾಯಗೊಂಡ ಬೈಕ್‌ ಸವಾರ ಸಂದೇಶ (35) ಅಲ್ಬಾಡಿ ಅವರನ್ನು ಸ್ಥಳೀಯರು ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದ್ದಾಗಿ ತಿಳಿಸಿದರು ಎಂದು ತಂದೆ ಕೃಷ್ಣಯ್ಯ(68)ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next