Advertisement

ಬಿಜೂರು: ಅಣ್ಣನ ಕೊಂದ ಆರೋಪಿ ಸೆರೆ

01:57 AM May 06, 2019 | Team Udayavani |

ಕುಂದಾಪುರ: ಬಿಜೂರು ಗ್ರಾಮದ ಬವಳಾಡಿಯಲ್ಲಿ ಸಹೋದರ ನಾಗರಾಜ (47)ನನ್ನು ಕೊಂದ ಆರೋಪದಲ್ಲಿ ಸಂತೋಷ (20)ನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

Advertisement

ಘಟನೆ ಬಳಿಕ ಪರಾರಿಯಾಗಿದ್ದ ಸಂತೋಷ್‌ನನ್ನು ಬಿಜೂರಿನ ನಾಯ್ಕನಕಟ್ಟೆಯಲ್ಲಿ ಬಂಧಿಸಿದ ಬೈಂದೂರು ಎಸ್‌ಐ ತಿಮ್ಮೇಶ್‌ ಹಾಗೂ ಸಿಬಂದಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ಮೇ 18ರ ವರೆಗೆ ಪೊಲೀಸ್‌ ಕಸ್ಟಡಿ ವಿಧಿಸಲಾಗಿದೆ.

ಮೇ 3ರಂದು ರಾತ್ರಿ ಕುಡಿದು ಮನೆಗೆ ಬಂದಿದ್ದ ಸಂತೋಷ್‌ಗೆ ರಾತ್ರಿ ವೇಳೆ ಮನೆಯ ಸುತ್ತಮುತ್ತ ನಿಕ್ಕರ್‌ನಲ್ಲಿ ಓಡಾಡಿಕೊಂಡಿದ್ದ.

ಇದಕ್ಕೆ ಅಣ್ಣ ನಾಗರಾಜ್‌ ಆಕ್ಷೇಪ ವ್ಯಕ್ತಪಡಿಸಿದ್ದ. ಆಗ ಕೋಪಗೊಂಡ ಸಂತೋಷನು ನಾಗರಾಜ್‌ ಹಾಗೂ ಜತೆಗಿದ್ದ ಸಂಬಂಧಿಗೆ ಊರುಗೋಲಿನಿಂದ ಹೊಡೆದಿದ್ದ. ಗಂಭೀರ ಗಾಯ ಗೊಂಡು ನಾಗರಾಜ್‌ ಸಾವನ್ನಪ್ಪಿದ್ದು, ಮತ್ತೋರ್ವ ಆಸ್ಪತ್ರೆಗೆ ದಾಖಲಾಗಿದ್ದ ಎಂದು ಆರೋಪಿಸಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next