Advertisement

Bihar: ಕಣ್ಣುಗುಡ್ಡೆ ಕಿತ್ತು, ಮರ್ಮಾಂಗ  ಕತ್ತರಿಸಿ, ಗುಂಡಿಕ್ಕಿ ಅರ್ಚಕನ ಹತ್ಯೆ

12:48 AM Dec 18, 2023 | Team Udayavani |

ಗೋಪಾಲ್‌ಗಂಜ್‌: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ ಶಿವದೇಗುಲದ ಅರ್ಚಕರೊಬ್ಬರ ಮೃತದೇಹ ರವಿವಾರ ಕಣ್ಣು ಗುಡ್ಡೆ ಕಿತ್ತುಹಾಕಿದ, ಮರ್ಮಾಂಗ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ದಾನಾಪುರ ಗ್ರಾಮದ ದೇಗುಲದ ಅರ್ಚಕ ಮನೋಜ್‌ ಕುಮಾರ್‌ ಮೃತದೇಹ ಪತ್ತೆಯಾಗುತ್ತಿದ್ದಂತೆ, ಪೊಲೀಸರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಿ ಸ್ಥಳೀಯರು, ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಜತೆಗೆ ಪೊಲೀಸರ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ಹಿಂಸೆಗೆ ತಿರುಗುತ್ತಿದ್ದಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.

ಮೃತ ಅರ್ಚಕನ ಸಹೋದರ ಸ್ಥಳೀಯ ಬಿಜೆಪಿ ಮುಖಂಡರಾಗಿದ್ದು, ಬಿಜೆಪಿಯು ನಿತೀಶ್‌ ಸರಕಾರ‌ದ ವಿರುದ್ಧ ವಾಗ್ಧಾಳಿ ನಡೆಸಿದೆ.

ರಾಜ್ಯದಲ್ಲಿ ಜಂಗಲ್‌ರಾಜ್‌ ಮರಳಿದೆ. ಬಿಹಾರದಲ್ಲಿ ಪೂಜಾರಿಯೊಬ್ಬರನ್ನು ಐಸಿಸ್‌ ಮಾದರಿಯಲ್ಲಿ ಕೊಲ್ಲಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next