Advertisement

Bihar: ಸಿಎಂ ನಿತೀಶ್‌ ಊಟದಲ್ಲಿ ವಿಷ ಬೆರೆತಿದೆ!- ಜಿತನ್‌ ರಾಮ್‌ ಮಾಂಜಿ ವ್ಯಂಗ್ಯ

08:55 PM Nov 10, 2023 | Team Udayavani |

ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಊಟದಲ್ಲಿ ಯಾರೋ ರಾಜಕೀಯ ವೈಷಮ್ಯಕ್ಕೆ ವಿಷ ಬೆರೆಸಿರಬೇಕು! ಹಾಗಾಗಿಯೇ ಇತ್ತೀಚೆಗೆ ನಿತೀಶ್‌ ಬರೀ ವಿಷಕಾರಿ ಮಾತುಗಳನ್ನೇ ಆಡುತ್ತಿದ್ದಾರೆ. ಹೀಗೆಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಜಿ ವ್ಯಂಗ್ಯವಾಡಿದ್ದಾರೆ.

Advertisement

ಬಿಹಾರ ವಿಧಾನಸಭೆಯಲ್ಲಿ ಮಾತಿಗೆ ಮಾತು ಬೆಳೆದು ತಮ್ಮ ಬುದ್ಧಿಗೇಡಿತನದಿಂದಾಗಿ ತಾನೇ ಮಾಂಜಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿದ್ದೆ ಎಂದು ನಿತೀಶ್‌ ಹೇಳಿದ್ದರು. ಈ ಬೆನ್ನಲ್ಲೇ ಮಾಂಜಿ ಅವರು ನಿತೀಶ್‌ ಅವರನ್ನು ವ್ಯಂಗ್ಯಮಾಡಿ ಇತ್ತೀಚೆಗೆ ಅವರ ವಿಷಕಾರಿ ಮಾತುಗಳು ಅವರ ಊಟದಲ್ಲಿ ವಿಷ ಬೆರೆತಿರುವುದನ್ನು ನಿರೂಪಿಸುತ್ತಿದೆ ಎಂದಿದ್ದಾರೆ.

ಇತ್ತೀಚೆಗೆ ಸಚಿವ ಅಶೋಕ್‌ ಚೌಧರಿ ಅವರ ತಂದೆ ಮೃತಪಟ್ಟಿದ್ದಾಗ ಅವರ ಮನೆಗೆ ನಿತೀಶ್‌ ತೆರಳಿದ್ದರು ಈ ವೇಳೆ ಮೃತರ ಫೋಟೋಗೆ ಹೂವು ಸಮರ್ಪಣೆ ಮಾಡುವ ಬದಲು ಅಶೋಕ್‌ ಅವರ ತಲೆಯ ಮೇಲೆ ಹೂವುಗಳನ್ನು ಹಾಕಿದ್ದರು. ಈ ವಿಡಿಯೋ ಕೂಡ ಭಾರೀ ವೈರಲ್‌ ಆಗಿತ್ತಲ್ಲದೇ ನಿತೀಶ್‌ ಆರೋಗ್ಯ ಸರಿಯಾಗಿದೆಯೇ ಎಂದೆಲ್ಲಾ ನೆಟ್ಟಿಗರು ಪ್ರಶ್ನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next